ಪ್ರಮುಖ ಸುದ್ದಿ

ಅಂದು ದುರ್ಯೋಧನ, ಇಂದು ದುರ್ಯೋ’ಧನ’ – ಕೇಂದ್ರ ಸಚಿವ ಹೆಗಡೆ

ಭಾರತಕ್ಕೆ ಕಾವಿಧಾರಿ ಇತಿಹಾಸವಿದೆ – ಸಚಿವ ಹೆಗಡೆ

ಉಡುಪಿ: ಹಿಂದಿನ ಕಾಲದಲ್ಲಿ ದುರ್ಯೋಧನ ಇದ್ದ, ಇಂದು ಸಹ ಧನದ ರೂಪದಲ್ಲಿ ದುರ್ಯೋ’ಧನ’ ಇದ್ದಾನೆ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಕಾಳಧನವನ್ನು ದುರ್ಯೋಧನನಿಗೆ ಹೋಲಿಸಿದರು. ಮುಂದುವರೆದು ಮಾತನಾಡಿ ಕೆಲವರು ಕೃಷ್ಣಮಠವನ್ನೇ ಕುಲಗೆಡಿಸಲು ಬಂದಿದ್ದರು ಎಂದು ಹೇಳಿ ಉಡುಪಿ ಚಲೋ ಮತ್ತು ಸಿಎಂ ಸಿದ್ಧರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಜ್ಞಾನ ಯಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇದೇ ವೇದಿಕೆಯಲ್ಲಿ ದೇಶದಲ್ಲಿ ಸಮಾನ ನಾಗರೀಕ ಸಂಹಿತೆ ಜಾರಿ ಬಗ್ಗೆ ಪ್ರಸ್ತಾಪಿಸಿದ ಪಲಿಮಾರು ಸ್ವಾಮೀಜಿಗಳ ಹೇಳಿಕೆಗೆ ಹೆಗಡೆ ಪ್ರತಿಕ್ರಿಯಿಸಿ ಸ್ವಾಮೀಜಿಗಳ ಸಂಕಲ್ಪ ನನಗೆ ಆದೇಶವಿದ್ದಂತೆ. ಏನೇ ಅಡೆತಡೆ ಬಂದರೂ ಗುರುವಿನ ಸಂಕಲ್ಪ ತಲೆಮೇಲೆ ಹೊತ್ತು ಕೆಲಸ ಮಾಡುತ್ತೇನೆ ಎಂದರು. ಅಲ್ಲದೆ ಕೆಲವರಿಗೆ ಧರ್ಮದ ಅರ್ಥ ತಿಳಿದುಕೊಳ್ಳುವ ಯೋಗ್ಯತೆಯಿಲ್ಲ. ಆಂಗ್ಲರ ಮನೋಭಾವದ ಕೆಲ ಇತಿಹಾಸಕಾರರು ಸುಳ್ಳು ಬರೆದಿದ್ದಾರೆ. ಭಾರತಕ್ಕೆ ಕಾವಿಧಾರಿ ಇತಿಹಾಸವಿದೆ ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button