ಪ್ರಮುಖ ಸುದ್ದಿಜನಮನ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಸರ್ಕಾರ ದ್ರೋಹ- ಹುಜರತಿ

ಹಿಂದಿಗೆ ಕೊಕ್ ವಿದ್ಯಾರ್ಥಿಗಳ‌ ಭವಿಷ್ಯದಲ್ಲಿ ಹುಡುಗಾಟ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಸರ್ಕಾರ ದ್ರೋಹ – ಖಾಸಿಂಅಲಿ ಹುಜರತಿ

ಹಿಂದಿಗೆ ಕೊಕ್ ವಿದ್ಯಾರ್ಥಿಗಳ‌ ಭವಿಷ್ಯದಲ್ಲಿ ಹುಡುಗಾಟ

ವಿನಯವಾಣಿ 
Yadgiri, ಶಹಾಪುರಃ ಇಡಿ ವರ್ಷ ಪರಿಶ್ರಮದಿಂದ ಓದಿಕೊಂಡು ಪರೀಕ್ಷೆ ಎದುರಿಸುತ್ತಿರುವ ವೇಳೆಯಲ್ಲಿ, ದಿಡೀರಂತೆ ಸರ್ಕಾರ ಹಿಂದಿ ವಿಷಯಕ್ಕೆ ಅಂಕಗಳ ಮನ್ನಣೆ ಇಲ್ಲ ಬರಿ ಗ್ರೇಡ್ ಕೊಡಲಾಗುವದೆಂದು ಆದೇಶ ಹೊರಡಿಸಿರುವದು ಪೂರ್ವ ತಯಾರಿ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಅನ್ಯಾಯ ಬಗೆದಂತೆ ಈ ಕೂಡಲೇ ಸರ್ಕಾರ ಪ್ರಸಕ್ತದಿಂದ ಹೊರಡಿಸಿದ ಆದೇಶ ಹಿಂಪಡೆಯಬೇಕೆಂದು ಶಿಕ್ಷಣ ಚಿಂತಕ ಖಾಸಿಂಅಲಿ ಹುಜರತಿ ಆಗ್ರಹಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆಯಲ್ಲಿಯೇ ಹಿಂದಿ ವಿಷಯ ಮೌಲ್ಯಾಂಕನಕ್ಕೆ ಪರಿಗಣಿಸುವದಿಲ್ಲ. ಒಟ್ಟು 625 ಅಂಕಗಳಲ್ಲಿ ಕೇವಲ 525 ಕ್ಕೆ ಇಳಿಸುವ ಮೂಲಕ ಒಟ್ಟು ಮೌಲ್ಯಾಂಕನದಲ್ಲಿ ಹಿಂದಿ ವಿಷಯದ 100 ಅಂಕಗಳು ಕಡಿತಗೊಳಿಸಿರುವದು ಓದಿಕೊಂಡಿದ್ದ ಶೇಕಡಾ ಸ್ಕೋರ್ ಜಾಸ್ತಿ ಮಾಡಲು ಅನುಕೂಲಕರವಾಗಿದ್ದ ಹಿಂದಿ ವಿಷಯದ ಅಂಕಗಳು ಪರಿಗಣಿಸದಿರುವದು ಪರಿಶ್ರಮಪಟ್ಟಿದ್ದ ವಿದ್ಯಾರ್ಥಿಗಳ ಮನಸ್ಸಿಗೆ ಘಾಸಿ ಮಾಡಿದಂತಾಗಿದೆ. ಕಾರಣ ಸರ್ಕಾರ ದಿಡೀರ ನಿರ್ಧಾರದಿಂದ ಹೊರ ಬರಬೇಕು. ಮುಂದಿನ ವರ್ಷದಿಂದ ಬೇಕಿದ್ದರೆ ಆದೇಶಿಸಲಿ. ಅಲ್ಲದೆ ಶೈಕ್ಷಣಿಕ ತಜ್ಞರ ಜೊತೆ ಚರ್ಚಿಸದೆ ಲಾಭ ನಷ್ಟ ಕುರಿತು ಅವಲೋಮಿಸದೆ ಕೇವಲ ರಾಜಕೀಯ ಲಾಭಕ್ಕಾಗಿ ಹಿಂದಿ ಅಂಕಗಳಿಗೆ ಕೊಕ್ ನೀಡಿರುವದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button