ವಿನಯ ವಿಶೇಷ
ಸಂತೆ ಮುಗಿಸಿದ ಹಿಂದೂ ಸಂತ
*ಸಂತೆ ಮುಗಿಸಿದ ಹಿಂದೂ ಸಂತ*
80 ವರ್ಷ ಅವಿರತ ಶ್ರಮವಹಿಸಿದ
ಸನ್ಯಾಸಿ ಶ್ರೀ ಪೇಜಾವರ
ಹಿಂದೂ ಧರ್ಮದ ತಿರುಳು ಸಾರುತ ಬದುಕಿದ ಪಾರಂಪರ
ದಲಿತರ ಪಾದ ಪೂಜೆ ಮೂಲಕ ತೋರಿದ ಸಮಭಾವ
ಸಾರಿ ಹೇಳಿದ ಹಿಂದು ಧರ್ಮ ಭಗವದ್ಗೀತೆಯ ಸದ್ಭಾವ
ಕೊಚ್ಚಿ ಮಹಾರಾಜರ ಆಸ್ಥಾನದಲ್ಲಿ
ನಡೆದಿತ್ತು ಒಂದು ದಿನ ಪಾಂಡಿತ್ಯ ಚರ್ಚೆ
35 ರ ಪ್ರಾಯದ ಪೇಜಾವರ ಶ್ರೀ ಮಂಡಿಸಿದ್ದ ವಿಷಯಕ್ಕೆ ಸಭೆ ಜಾರಿತ್ತು ಸುಮೂರ್ಚೆ
ಜೀವಪರ ಕಾಳಜಿ ಹೊಂದಿದ ಜೀವಿ ವಿಶ್ವೇಶ ತೀರ್ಥ.
ಬದುಕಿನುದ್ದಕ್ಕೂ ಹಾಗೇ ಬದುಕಿ ತೋರಿದ ಮಹಾಂತ.
ಇಂದು ಶ್ರೀ ಪೇಜಾವರರು ತೆರಳಿದರು ಬಾರದ ಲೋಕಕ್ಕೆ
ನಂಬಿದ್ದ ಸಿದ್ಧಾಂತ ಹಂಚಿ ಹೋದರು ಮಾನವ ಕುಲಕ್ಕೆ.
ಮಡೆಸ್ನಾನ ಬದಲಿಗೆ ಎಡೆ ಸ್ನಾನ ಜಾರಿಗೆ ತಂದ ರಾಮಕುಂಜ.
ಭಕ್ತರ ಪಾಲಿನ ಸನ್ಮಾರ್ಗ ತೋರುವ
ಬೆಲ್ಲದ ಕುಂಜ.
ಸಿದ್ಧಾಂತ ಪುರುಷ ಸಾಂಸ್ಕೃತಿಕ ತೇಜ, ದೇಶ ಕಂಡ ಅಕ್ಕರೆಯ, ಸಮಾನತೆಯ ಪುಂಜ
ಭೂಮಂಡಲಾಚೆಗೂ ಹೊಂದಿದ್ದ ಭಕ್ತ ಕೂಟ.
ಸಮಸ್ತ ಕನ್ನಡ ಕುಲಕೋಟಿಗೆ ಬೀರಿದ ಮಾರ್ಗದರ್ಶನದ ನೋಟ.
– ಮಲ್ಲಿಕಾರ್ಜುನ ಮುದನೂರ.