ವಿನಯ ವಿಶೇಷ

ಹಂತಕರೇ ಹುಷಾರ್ : ಹಂತಕನಿಗೆ ಹನ್ನೊಂದು ದಿನದಲ್ಲೇ ಜೀವವಾಧಿ ಶಿಕ್ಷೆ ಪ್ರಕಟ

ಚಿತ್ರದುರ್ಗ: ಚಿತ್ರದುರ್ಗ ಪ್ರಧಾನ ಹಾಗು ಸತ್ರ ನ್ಯಾಯಾಲಯವು ಶನಿವಾರ ಐತಿಹಾಸಿಕ ಇತಿಹಾಸವನ್ನು ತೀರ್ಪೊಂದನ್ನು ಪ್ರಕಟಿಸಿದೆ. ಶೀಲ ಶಂಕಿಸಿ ಪತ್ನಿಯನ್ನು ಹತ್ಯೆಗೈದ ಹಂತಕನಿಗೆ ಪ್ರಕರಣ ನಡೆದ 11 ದಿನದೊಳಗೆ ವಿಚಾರಣೆ ನಡೆಸಿ ಜೀವಾವಧಿ ಶಿಕ್ಷೆ ಹಾಗೂ 5ಸಾವಿರ ರೂಪಾಯಿ ದಂಡ ವಿಧಿಸಿದೆ.

ಕಳೆದ ಜೂನ್ 27ರಂದು ಮಲಗಿದ್ದ ಪತ್ನಿ ತಲೆ ಮೇಲೆ ಗುಂಡುಕಲ್ಲು ಎತ್ತಿ ಹಾಕಿ ಪತಿಯೇ ಹತ್ಯೆ ಮಾಡಿದ ಘಟನೆ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ವಲಸೆ ಗ್ರಾಮದಲ್ಲಿ ನಡೆದಿತ್ತು ಪತ್ನಿ ಪುಟ್ಟಮ್ಮ(65) ಜೊತೆ ಜಗಳವಾಡುತ್ತಿದ್ದ ಪರಮೇಶ್ವರಸ್ವಾಮಿಗೆ(75) ಈ ಹಿಂದೆಯೂ ಅನೇಕ ಸಲ ಗ್ರಾಮಸ್ಥರು, ಸಂಬಂಧಿಕರು ಬುದ್ಧಿ ಹೇಳಿದ್ದರು. ಆದರೆ, ಯಾರ ಮಾತೂ ಕೇಳದೆ ಇಳಿವಯಸ್ಸಿನಲ್ಲೂ ಪತ್ನಿಯ ಶೀಲ ಶಂಕಿಸುತ್ತಿದ್ದ ಪರಮೇಶ್ವರಸ್ವಾಮಿ ಜೂನ್ 27ರಂದು ಪತ್ನಿಯ ಹತ್ಯೆಗೈದಿದ್ದನು.

ಹತ್ಯೆ ಬಳಿಕ ಮನೆಬಿಟ್ಟು ಹೋಗಿ ಬಸ್ ನಿಲ್ದಾಣದ ಬಳಿಯಿದ್ದ ಪರಮೇಶ್ವರಸ್ವಾಮಿಯನ್ನು ಪೊಲೀಸರು ಬಂಧಿಸಿದ್ದರು.  ಪ್ರಕರಣ ಸಂಬಂಧ ಸಾಕ್ಷಾಧಾರಗಳನ್ನು ಕಲೆ ಹಾಕಿದ್ದ ತಳಕು ಠಾಣೆ ಪೊಲೀಸರು ಕೇವಲ ಎರಡು ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪುಟ್ಟಮ್ಮ ಅವರ ಪುತ್ರ ಸೇರಿ 17 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದ್ದ ನ್ಯಾಯಾಲಯ ತ್ವರಿತವಾಗಿ ವಿಚಾರಣೆ ಮುಗಿಸಿದೆ. ಪ್ರಕರಣ ನಡೆದ ಕೇವಲ ಹನ್ನೊಂದು ದಿನಗಳಲ್ಲಿಯೇ ಶಿಕ್ಷೆ ಪ್ರಕಟಿಸಿದೆ.

ಉತ್ತರ ಪ್ರದೇಶದಲ್ಲಿ ಪ್ರಕರಣವೊಂದರಲ್ಲಿ 23ದಿನಗಳಲ್ಲಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದನ್ನು ಹಿಂದಿಕ್ಕಿದೆ. ದೇಶದ ನ್ಯಾಯಾಂಗ ಇತಿಹಾಸದಲ್ಲಿ ಶೀಘ್ರವಾಗಿ ಇತ್ಯರ್ಥವಾದ ಮೊದಲ ಕ್ರಿಮಿನಲ್ ಪ್ರಕರಣ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ಆ ಮೂಲಕ ಕ್ರಿಮಿನಲ್ಸ್ ಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

Related Articles

Leave a Reply

Your email address will not be published. Required fields are marked *

Back to top button