ಪ್ರಮುಖ ಸುದ್ದಿ

ಷಡ್ಯಂತರ ಮಾಡಿದವರಿಗೆ ಜೈಲ್ಗೆ ಹಾಕಿಸದೆ ಬಿಡಲ್ಲ- ಜಾರಕಿಹೊಳಿ

ಇದು 100% ನಕಲಿ ಸಿಡಿ 4 ತಿಂಗಳ ಮೊದ್ಲೆ ಗೊತ್ತಿತ್ತು –
ನನಗೆ ಕುಟುಂಬದ ಮರ್ಯಾದೆ ಮುಖ್ಯ, ಷಡ್ಯಂತರ ಮಾಡಿದವರಿಗೆ ಜೈಲ್ಗೆ ಹಾಕಿಸದೆ ಬಿಡಲ್ಲ

ವಿವಿ ಡೆಸ್ಕ್ಃ ಈ ಸಿಡಿ 100% ನಕಲಿ ಇದೆ. ಇದರಿಂದ ದುಃಖಿತನಾಗಿದ್ದೇನೆ. ನನ್ನ ರಾಜಕೀಯವಾಗಿ ಮುಗಿಸಲು ನೂರಾರು ಕೋಟಿ ಖರ್ಚು ಮಾಡಿ ಷಡ್ಯಂತರ ನಡೆಸಿದ್ದಾರೆ.

ಷಡ್ಯಂತರ ಮಾಡಿರುವದನ್ನು ಜೈಲಿಗೆ ಹಾಕಿಸದೆ ಬಿಡುವದಿಲ್ಲ. ನನಗೆ ರಾಜಕೀಯಕ್ಕಿಂತ ನನ್ನ ಕುಟುಂಬದ ಮರ್ಯಾದೆ ಬಹುಮುಖ್ಯ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ವಾರದ ಹಿಂದೆ ಮೌನಕ್ಕೆ ಜಾರಿ ಮಾಧ್ಯಮದವರಿಗೆ ಸಿಗದೆ ಮೌನ ತಾಳಿದ್ದ ಅವರು ಇಂದು ಸುದ್ದಿಗೋಷ್ಠಿ ನಡೆಸಿದರು.
ಸಿಡಿಯಿಂದ ಮಹಾನ್ ನಾಯಕರಿದ್ದಾರೆ ಒಬ್ಬರಿಲ್ಲ ಇಬ್ಬರಲ್ಲ ನಾಲ್ಕು ಜನರಿದ್ದಾರೆ. ಒಬ್ಬರು ಮಹಾನ್ ನಾಯಕರಿದ್ದಾರೆ.

ನಾನು ಎಲ್ಲವನ್ನು ಹೇಳಲಾಗುವದಿಲ್ಲ. ಸಿಡಿ ಬಿಡುಗಡೆ ನಂತರ ನನಗೆ ಕುಮಾರಸ್ವಾಮಿ ಅವರು ಸಿಎಂ ಯಡಿಯೂರಪ್ಪ ಸೇರಿದಂತೆ ಪಕ್ಷಾತೀತವಾಗಿ ವಯಕ್ತಿಕವಾಗಿ ನನಗೆ ಧೈರ್ಯ ತುಂಬಿದ್ದಾರೆ. ಮತ್ತು ನನ್ನ ಕುಟುಂಬಸ್ಥರು ಸಹೋದರರು ಪಕ್ಷಾತೀತವಾಗಿ ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದಗಳು ವ್ಯಕ್ತಪಡಿಸಿದ ಅವರು, ಬೆಂಗಳೂರಿನ ಎರಡು ಕಡೆ ಈ ಷಡ್ಯಂತರ ತಂತ್ರಗಾರಿಕೆ ನಡೆದಿದೆ.

ಯಶವಂತರಪುರ ಕಟ್ಟಡದ ನಾಲ್ಕನೇಯ ಫ್ಲೋರ್ ಮತ್ತು ಓರಾಯನ್ ಬಳಿ ಕಟ್ಟಡದ ಐದನೇಯ ಫ್ಲೋರ್ ನಲ್ಲಿ ಷಡ್ಯಂತರ ನಡೆದಿದೆ ಅವರ ಹೆಸರು ಹೇಳಲ್ಲ ಎಂದು ಮಾಹಿತಿ ನೀಡಿದರು.

ಈ ಕೆಲಸಕ್ಕೆ ಯುವತಿಗೆ 5 ಕೋಟಿ ನೀಡಿದ್ದಷ್ಟೆ ಅಲ್ಲದೆ ವಿದೇಶದಲ್ಲಿ ಎರಡು ಪ್ಲಾಟ್ ಸಹ ನೀಡಿದ್ದಾರೆ ಎಂಬ ಮಾಹಿತಿ ಇದೆ ಇದೆಲ್ಲ ಹೊರಗಡೆ ಬರಬೇಕಿದೆ. ನನ್ನ ವಿರುದ್ಧ ಷಡ್ಯಂತರ ‌ನಡೆಸಿದ ಅವರನ್ನು ಜೈಲಿಗೆ ಹಾಕುವವರೆಗೂ ಬಿಡುವದಿಲ್ಲ ಎಂದು ಗೋಷ್ಠಿ ಮುಗಿಸಿದರು.

ನಾನು ನಿರಪರಾಧಿ. ನನಗೆ ಯಾವುದೇ ಭಯವಿರಲಿಲ್ಲ. ಅಂದು ಚಾಮುಂಡಿ ತಾಯಿ ದರ್ಶನಕ್ಕೆ ಹೋಗಿದ್ದೆ. ನನಗೆ ಭಯವಿದ್ರೆ ನಾನೇಕೆ ಅಂದು ದೇವಿ ದರ್ಶನಕ್ಕೆ ಹೋಗ್ತಿದ್ದೆ. ಅಲ್ಲದೆ ವಚನಾನಂದ ಶ್ರೀಗಳ ಜೊತೆ ಚರ್ಚೆ ನಡೆಸಿದ್ದೇನೆ. ಇದೆಲ್ಲ ಯಾವ ಭಯ ಆಗ ನನಗಿರಲಿಲ್ಲ. ನಾನು ತಪ್ಪು ಮಾಡಿಲ್ಲ.

-ರಮೇಶ ಜಾರಕಿಹೊಳಿ. 

Related Articles

Leave a Reply

Your email address will not be published. Required fields are marked *

Back to top button