ಪ್ರಮುಖ ಸುದ್ದಿ

ಜೈಲಿನಿಂದ ಹೊರಬಂದ ಮಾಜಿ ಶಾಸಕ ರವಿಕಾಂತ ಪಾಟೀಲ್ ಆತ್ಮಹತ್ಯೆಯ ಮಾತನಾಡಿದ್ದೇಕೆ?

ವಿಜಯಪುರ: ಅಕ್ರಮ ಮರಳು ಗಣಿಗಾರಿಕೆ ತಡೆಯಲು ಯತ್ನಿಸಿದ್ದ ನಮ್ಮನ್ನು ಹಲ್ಲೆ ಪ್ರಕರಣದಲ್ಲಿ ಜೈಲಿನಲ್ಲಿಡಲಾಗಿತ್ತು. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್, ನಾಗಠಾಣ ಶಾಸಕ ರಾಜೂ ಆಲಗೂರು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಇಂಡಿ ಡಿವೈಎಸ್ಪಿ ರವೀಂದ್ರ ಶಿರೂರು, ಚಡಚಣ ಸಿಪಿಐ ಚಂದ್ರಕಾಂತ, ಝಳಕಿ ಪಿಎಸ್ ಐ ಸುರೇಶ ಸೇರಿ ನಮ್ಮ ವಿರುದ್ಧ ತಂತ್ರ ರೂಪಿಸಿ ಜೈಲಿಗೆ ಕಳುಹಿಸಿದ್ದರು ಎಂದು ವಿಜಯಪುರದಲ್ಲಿ ಇಂಡಿ ಕ್ಷೇತ್ರದ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆರೋಪಿಸಿದ್ದಾರೆ.

ಹಲ್ಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಇಂದು ಜಾಮೀನು ಮೇಲೆ ಬಿಡುಗಡೆ ಆಗಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು ನನ್ನ ವಿರುದ್ಧ ಪಿತೂರಿ ಮಾಡಿರುವವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಪೊಲೀಸ್ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು. ಮರಳು ಸಾಗಣೆ ತಡೆಯಬೇಕು. ಇಲ್ಲವಾದಲ್ಲಿ ಇದೇ ಆಗಷ್ಟ್ 10ನೇ ತಾರೀಖು ಝಳಕಿಯಲ್ಲಿ ಬೆಂಕಿಗಾಹುತಿ ಆಗುತ್ತೇನೆಂದು ಹೇಳಿದ್ದಾರೆ.  ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುವ ಮೂಲಕ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಮಾಜಿ ಶಾಸಕರ ಈ ಹೇಳಿಕೆಯನ್ನು ಯಾವ ರೀತಿ ಪರಿಗಣಿಸಲಿದ್ದಾರೆ. ಆತ್ಮಹತ್ಯೆಯ ಮಾತನಾಡಿರುವ ಮಾಜಿ ಶಾಸಕ ರವಿಕಾಂತ್ ಪಾಟೀಲ್ ವಿರುದ್ಧ ಮತ್ತೊಂದು ಕೇಸು ಬೀಳಲಿದೆಯೇ. ಅಥವಾ ಅಧಿಕಾರಿಗಳ ವಿರುದ್ಧ ತನಿಖೆ ಆರಂಭವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button