ಪ್ರಮುಖ ಸುದ್ದಿ
ಕೊನೆಗೂ ಕೋಟೆನಾಡಿನಲ್ಲಿ ಸೆರೆಸಿಕ್ಕಿತು ಇರಾನಿ ಗ್ಯಾಂಗ್!
ಚಿತ್ರದುರ್ಗ : ಕಳೆದ ಒಂದು ತಿಂಗಳಿಂದ ಚಿತ್ರದುರ್ಗ ಜಿಲ್ಲೆಗೆ ಇರಾನಿ ಗ್ಯಾಂಗ್ ಕಾಲಿಟ್ಟಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಪೊಲೀಸ್ ಅಧಿಕಾರಿಗಳು ಸಹ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಜಾಗೃತಿ ಸಂದೇಶ ಸಾರಿದ್ದರು. ಆದರೆ, ಹಿರಿಯೂರು ಡಿವೈಎಸ್ಪಿ ರಮೇಶ್ ನೇತೃತ್ವದ ಟೀಮ್ ಇರಾನಿ ಗ್ಯಾಂಗ್ ಜಾಡು ಹಿಡಿದು ಹೋಗಿ ಏಳು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಲ್ಕೆರೆ ಗ್ರಾಮದ ಅಬ್ಬಾಸ್ ಅಲಿ, ಮಹಮ್ಮದ್ ಅಲಿ, ಚಿಂಚು ಭಾಯ್, ಸೈಯದ್ ಅಬು ಅಲಿ, ಸಜ್ಜದ್ ಅಲಿ ಶೇಕ್ ಮುಲ್ಲಾ ಹಾಗೂ ಶಿಯಾರಾಣಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ, ಕೋಲಾರ ಸೇರಿದಂತೆ ರಾಜ್ಯದ ವಿವಿದೆಡೆ 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈ ಗ್ಯಾಂಗ್ ಭಾಗಿಯಾಗಿದ್ದು ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಲಾಗಿದ್ದು ಹೆಚ್ಚಿನ ವಿಚಾರಣೆ ನಡೆದಿದೆ ಎಂದು ಚಿತ್ರದುರ್ಗ ಎಸ್ಪಿ ಡಾ.ಅರುಣ್.ಕೆ. ತಿಳಿಸಿದ್ದಾರೆ.