ಪ್ರಮುಖ ಸುದ್ದಿ
ಅಕ್ಟೋಬರ್ 2ನೇ ವಾರದಲ್ಲಿ BSY ಸಿಎಂ- ರಂಭಾಪುರಿಶ್ರೀ
ಕಾಡಸಿದ್ಧೇಶ್ವರ ಃ ಬರುವ ಅಕ್ಡೋಬರ್ ಎರಡನೇ ವಾರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮತ್ತೇ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ನೊಣವಿನಕೆರೆ ಕಾಡಸಿದ್ಧೇಶ್ವರ ಮಠದ ಕಾರ್ಯಕ್ರಮವೊಂದರಲ್ಲಿ ಬಾಳೆಹೊನ್ನೂರ ಜಗದ್ಗುರು ಪೀಠದ ಶ್ರೀರಂಭಾಪುರಿ ಶ್ರೀಗಳು ಮಾತನಾಡುತ್ತ ಈ ಭವಿಷ್ಯ ನುಡಿದರು.
ಬಿಎಸ್ ವೈ ಜಾತಕ ಕುಂಡಲಿ ಪ್ರಕಾರ ಅವರು ಈ ಭವಿಷ್ಯವನ್ನು ಮಾತನಾಡುವ ವೇಳೆ ಹೇಳಿಕೆ ನೀಡಿದ್ದಾರೆ.
ಬಿ.ಎಸ್.ವೈ. ಸಾಕಷ್ಟು ನೊಂದಿದ್ದಾರೆ. ಅವರ ಸೇವೆ ಮುಂದುವರೆಸಲು ಅಧಿಕಾರ ದೊರೆಯಲಿದೆ ಎಂದರು.