ಪ್ರಮುಖ ಸುದ್ದಿ

ಬಿಜೆಪಿ ಕರೆ ನೀಡಿದ ಆಹೋರಾತ್ರಿ ಧರಣಿಗೆ ಬೆದರಿದ್ರಾ ಕುಮಾರಸ್ವಾಮಿ.?

ಜಿಂದಾಲ ಸಂಸ್ಥೆಗೆ 3 ಎಕರೆ ಭೂಮಿ ಪರಭಾರೆ ಮರು ಪರಿಶೀಲನೆಗೆ ಸಿಎಂ ಸೂಚನೆ.!

ಬೆಂಗಳೂರಃ ಬಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್ ನಾಯಕರಿಂದಲೂ ತೀವ್ರ ವಿರೋಧ ವ್ಯಕ್ತವಾಗಿದ್ದ, ಜಿಂದಾಲ್ ಸಂಸ್ಥೆಗೆ ನೀಡುವ ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ಮರು ಪರಿಶೀಲನೆಗೆ ಆದೇಶಿಸಿದ್ದಾರೆ.

ಜಾಹಿರಾತು

ಜಿಂದಾಲ್ ಸಂಸ್ಥೆಗೆ 3 ಸಾವಿರ ಎಕರೆಗೂ ಹೆಚ್ಚು ಭೂಮಿಯನ್ನು ಪರಭಾರೆ ಮಾಡಲು ತಯ್ಯಾರಾಗಿದ್ದ ರಾಜ್ಯ ಸರ್ಕಾರದ ಕ್ರಮ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಅಲ್ಲದೆ ಈ ವಿಚಾರದಲ್ಲಿ ಪ್ರತಿಪಕ್ಷ ನಾಯಕ ಮಾಜಿ ಸಿಎಂ ಯಡಿಯೂರಪ್ಪ ಜಿಂದಾಲಗೆ ಭೂಮಿ‌ ಪರಭಾರೆ ವಿಷಯದಲ್ಲಿ ಡೀಲ್ ನಡೆದಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕಿಕ್ ಬ್ಯಾಕ್ ದೊರೆತಿದೆ ಎಂದು ಗಂಭೀರ ಸ್ವರೂಪದ ಆರೋಪವು ಮಾಡಿದ್ದರು.

ಅಷ್ಟೆ ಅಲ್ಲದೆ‌ ಪರಿಸ್ಥಿತಿಯ ತೀವ್ರತೆ ಅರಿತ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಚ್ಕೆ ಪಾಟೀಲ್ ಈ ಕುರಿತು ಬಹಿರಂಗವಾಗಿಯೆ ಟೀಕಿಸಿದ್ದರು.

ಬಿಜೆಪಿ ಭೂಮಿ ಪರಭಾರೆ ಡೀಲ್ ಗೆ ಸಂಬಂಧಿಸಿದಂತೆ ಗುರುವಾರದಿಂದ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ‌ ಆಹೋ ರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು.

ಯಡಿಯೂರಪ್ಪ ನವರು ಕರೆ ನಿಡಿದ್ದ ಆಹೋರಾತ್ರಿ ಧರಣಿಗೆ ಬೆದರಿದಂತೆ ಕಂಡಿರುವ ಸಿಎಂ ಕುಮಾರಸ್ವಾಮಿ ದೋಸ್ತಿ ಸರ್ಕಾರದ ಪ್ರಮುಖರ ಜೊತೆ ಚರ್ಚಿಸಿ‌ ಮರು ಪರಿಶೀಲನೆಗೆ ಆದೇಶ ನೀಡಿದ್ದು, ಮತ್ತೊಮ್ಮೆ ಸಚಿವ ಸಂಪುಟದಲ್ಲಿ ಚರ್ಚೆಗಾಗಿ ಪುನಃ ಮಂಡಿಸುವಂತೆ ಸೂಚಿಸಿದ್ದೇನೆ ಎಂದು ಟ್ವೀಟ್ ಮೂಲಕ ಸಿಎಂ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button