ಪ್ರಮುಖ ಸುದ್ದಿ
ಅಕ್ಟೋಬರ್ 29ಕ್ಕೆ ಕಲಬುರಗಿ ಟೂ ಬೀದರ್ ರೈಲು ಮಾರ್ಗಕ್ಕೆ ಮೋದಿ ಗ್ರೀನ್ ಸಿಗ್ನಲ್
ಕಲಬುರಗಿ: ಅಕ್ಟೋಬರ್ 29ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರ್ನಾಟಕ ರಾಜ್ಯ ಪ್ರವಾಸ ನಿಗದಿಯಾಗಿದೆ. ಬೆಂಗಳೂರು, ಧರ್ಮಸ್ಥಳ ಮತ್ತು ಬೀದರ್ ಗೆ ಭೇಟಿ ನೀಡಲಿದ್ದಾರೆಂದು ತಿಳಿದು ಬಂದಿದೆ. ಇದೇ ವೇಳೆ ಬೀದರ್ ನಗರದಲ್ಲಿ ಬೀದರ್ ಟೂ ಕಲಬುರಗಿ ರೈಲ್ವೆ ಮಾರ್ಗಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.
ಈಗಾಗಲೇ ಬೀದರ್ ಟೂ ಕಲಬುರಗಿ ಸಂಚಾರಕ್ಕೆ ರೆಡಿಯಾಗಿದೆ.ಈ ಯೋಜನೆ ಹೈದರಾಬಾದ್ ಕರ್ನಾಟಕ ಪ್ರದೇಶದ ಮಹತ್ವದ ಯೋಜನೆಯಾಗಿದೆ. 1999ರಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆ ಈಗಾಗಲೇ ಪೂರ್ಣಗೊಂಡಿದ್ದು ಸಂಚಾರಕ್ಕೆ ಮುಕ್ತವಾಗಿದೆ. ಸುಮಾರು 110 ಕಿ.ಮೀ.ಗಳ ರೈಲು ಮಾರ್ಗ ಇದಾಗಿದ್ದು ಈ ಮಾರ್ಗದಲ್ಲಿ 14 ಬೃಹತ್ ಸೇತುವೆ. 183 ಸಣ್ಣ ಸೇತುವೆಗಳಿವೆ. ಬೀದರ್-ಕಲಬುರಗಿ ನಡುವೆ 13 ರೈಲ್ವೆ ನಿಲ್ದಾಣಗಳಿವೆ.
ಕಲಬುರಗಿಯಿಂದ ಸೊಲ್ಲಾಪುರದ ವರೆಗಿನ ದ್ವಿಪಥ ರೈಲು ಮಾರ್ಗ ಕಾಮಗಾರಿ ನಿರ್ಮಾಣ ಹಂತದಲ್ಲಿದೆ. ಕಾಮಗಾರಿ ಪೂರ್ಣಗೊಂಡರೆ ಬೆಂಗಳೂರಬಿನಗರದಿಂದ ಕಲಬುರಗಿಗೆ ತೆರಳಲು ಒಂದೂವರೆ ತಾಸಿನಷ್ಟು ಸಮಯ ಉಳಿಯಲಿದೆ.