ಪ್ರಮುಖ ಸುದ್ದಿ
ಕಲಬುರ್ಗಿ ಶರಣ ಸಂಸ್ಥಾನದ ಉತ್ತರಾಧಿಕಾರಿಯಾಗಿ ದೊಡ್ಡಪ್ಪ ಅಪ್ಪ ನೇಮಕ
ಶರಣಬಸವೇಶ್ವರ ಸಂಸ್ಥಾನದ 9 ನೇ ಪೀಠಾಧಿಪತಿಯಾಗಿ ಚಿರಂಜೀವಿ ದೊಡ್ಡಪ್ಪ ಅಪ್ಪ ನೇಮಕ
ಕಲಬುರ್ಗಿಃ ಕಲ್ಯಾಣ ಕರ್ನಾಟಕ ಭಾಗದ ಬಹುದೊಡ್ಡ ಪ್ರತಿಷ್ಠಿತ ಶರಣಬಸವೇಶ್ವರ ಸಂಸ್ಥಾನದ 9 ನೇ ಉತ್ತರಾಧಿಕಾರಿ ಯಾಗಿ ಪ್ರಸ್ತುತ 8 ನೇ ಪೀಠಾಧಿಪತಿಗಳಾದ ಶರಣಬಸಪ್ಪಅಪ್ಪ ಅವರು ತಮ್ಮ ಚಿರಂಜೀವಿ ಯಾದ ದೊಡ್ಡಪ್ಪಅಪ್ಪ ಅವರನ್ನು ಧಾರ್ಮಿಕ ವಿಧಿ ವಿಧಾನ ಪ್ರಕಾರ ನಿನ್ನೆ ಸಂಸ್ಥಾನದ ಉತ್ತರಾಧಿಕಾರಿಯಾಗಿ ಅಧಿಕೃತವಾಗಿ ನೇಮಿಸಿದರು.
ಈ ಸಂದರ್ಭದಲ್ಲಿ ಮಾತೋಶ್ರೀ ದಾಕ್ಷಾಯಿಣಿ ಮತ್ತು ವಿವಿಧ ವೀರಶೈವ ಮಠಾಧೀಶರ ಸಮ್ಮುಖದಲ್ಲಿ ಚಿರಂಜೀವಿ ದೊಡ್ಡಪ್ಪ ಅಪ್ಪನವರಿಗೆ ಅಭಿಷೇಕ ಮತ್ತು ಉತ್ತರಾಧಿಕಾರಿ ಸಂಸ್ಕಾರ ನೆರವೇರಿಸಲಾಯಿತು.
ಶರಣಬಸವೇಶ್ವರರು ಕೊನೆಯ ದಿನಗಳನ್ನು ಕಳೆದಿದ್ದ ಕೋಣೆಯಲ್ಲಿಯೇ ಉತ್ತರಾಧಿಕಾರಿ ಸಂಸ್ಕಾರ ನಡೆದಿರುವದು ಮಹತ್ವ ತಂದಿದೆ ಎನ್ನಲಾಗಿದೆ. ಈಗಿನ ಪೀಠಾಧಿಪತಿ ಶರಣಬಸಪ್ಪ ಅಪ್ಪನವರು ನಿತ್ಯ ಇದೆ ಕೋಣೆಯ ದರ್ಶನ ಪಡೆಯುತ್ತಿದ್ದರು ಎನ್ನಲಾಗಿದೆ.