ಕೊರೊನಾ ಬೋಗಸ್, ಇನ್ಮೇಲೆ ಯಾರು ಮಾಸ್ಕ್ ಧರಿಸಬೇಡಿ – ಸವಾಲೆಸೆದ ಬಳ್ಳಾರಿ ಸ್ವಾಮೀಜಿ
ಕೊರೊನಾ ಬೋಗಸ್, ಇನ್ಮೇಲೆ ಯಾರು ಮಾಸ್ಕ್ ಧರಿಸಬೇಡಿ – ಸವಾಲೆಸೆದ ಬಳ್ಳಾರಿ ಸ್ವಾಮೀಜಿ
ಬಳ್ಳಾರಿಃ ಕೊರೊನಾ ಒಂದು ಬೋಗಸ್ ಸೋಂಕು ಇದರಿಂದ ಯಾರಿಗೂ ತೊಂದರೆಯಾಗಲ್ಲ. ಸರ್ಕಾರಕ್ಕೆ ನಾನು ಓಪನ್ ಚಾಲೆಂಜ್ ಮಾಡುವೆ. ನೂರು ಜನ ಕೊರೊನಾ ಸೋಂಕಿತರ ನಡುವೆ ಸಮಯ ಕಳೆದು ಬರುವೆ ನನಗೆ ಅದ್ಹೇಗೆ ಕೊರೊನಾ ಬರುತ್ತೇ ನೋಡೋಣ ಎಂದು ನಗರದ ಕಲ್ಯಾಣ ಮಠದ ಕಲ್ಯಾಣ ಸ್ವಾಮೀಜಿ ಸವಾಲೆಸೆದ ಘಟನೆ ನಡೆದಿದೆ.
ಮಾಧ್ಯಮದಲ್ಲಿ ಈ ಕುರಿತು ವೈರಲ್ ಆಗಿದ್ದು, ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಸ್ವಾಮೀಜಿ ಕೊರೊನಾ ಒಂದು ಸುಳ್ಳಿನ ರೋಗ. ಇದು ಸೃಷ್ಟು ಮಾಡಿದ ರೋಗ, ಇದರಿಂದ ಯಾರು ಸತ್ತಿಲ್ಲ ಸತ್ತವರೆಲ್ಲ ಬೇರೆ ಬೇರೆ ರೋಗಗಳಿಂದಬಳಲುತ್ತಿರುವವರಾ ಗಿದ್ದಾರೆ.
ಹೀಗಾಗಿ ಇನ್ಮುಂದೆ ಮಾಸ್ಕ್ ಯಾರು ಧರಿಸಬೇಡಿ. ಅದರ ಅಗತ್ಯವಿಲ್ಲ. ಬರಿ ಬಿಸಿ ನೀರು ಕುಡಿದರೆ ಹೋಗುವ ರೋಗಕ್ಕೆ ಸುಖಾಸುಮ್ಮನೆ ವೈಭವೀಕರಿಸಲಾಗಿದೆ ಎಂದು ಆರೋಪಿಸಿದರು. ಯಾರೊಬ್ಬರು ಈ ಸೋಂಕಿಗೆ ಹೆದರುವ ಅಗತ್ಯವಿಲ್ಲ.
ನಾನು ಸೋಂಕು ಇರುವ ಬೇರೆ ಬೇರೆ ಕಡೆಗಳಲ್ಲಿ ಪ್ರವಾಸ ಮಾಡಿ ಬಂದಿರುವೆ. ಮಹಾರಾಷ್ಟ್ರ, ಬೆಂಗಳೂರಿಗೆ ಹೋಗಿ ಬಂದಿರುವೆ ನನಗ್ಯಾವ ರೋಗವು ಬಂದಿಲ್ಲ. ಕೊರೊನಾ ಗೆ ಹೆದರುವ ಅಗತ್ಯವಿಲ್ಲವೆಂದು ಅವರು ತಿಳಿಸಿದ್ದಾರೆ.