ಪ್ರಮುಖ ಸುದ್ದಿ
ತಾನೂ ವಿಷಕಂಠ ಎಂದಿದ್ದ ಸಿಎಂ ಎಚ್ಡಿಕೆ ಹೇಳಿಕೆಗೆ ಖರ್ಗೆ ಅಸಮಾಧಾನ
ಬೆಂಗಳೂರಃ ಸಿಎಂ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗೆ ನೀಡಿದ ತಾನು ವಿಷಕಂಠ ಎಂಬ ಹೇಳಿಕೆಗೆ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಆಪ್ತರಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
37 ಶಾಸಕರನ್ನು ಹೊಂದಿದ್ದ ಜೆಡಿಎಸ್ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಿದ್ದು, ಅಲ್ಲದೆ ಇಂಧನ ಮತ್ತು ಹಣಕಾಸು ಅಂತಹ ದೊಡ್ಡ ಖಾತೆಯು ಅವರಿಗೆ ನೀಡಲಾಗಿದೆ.
ಕೇವಲ ಉಪಮುಖ್ಯಮಂತ್ರಿ ಸ್ಥಾನಕ್ಕೆ ಮಾತ್ರ ನಾವು ತೃಪ್ತಿಪಟ್ಟುಕೊಂಡಿದ್ದರೂ, ತಾನೂ ವಿಷಕಂಠ ಎಂದು ಹೇಳಿಕೆ ನೀಡಿದರೆ ಜನರಿಗೆ ಏನ್ ಸಂದೇಶ ಹೋಗುತ್ತಿದೆ ಎಂಬುದು ಗೊತ್ತಾ, ಸಮ್ಮಿಶ್ರ ಸರ್ಕಾರದಲ್ಲಿ ಏನೋ ನಡಿತಿದೆ ಎಂಬ ಗೊಂದಲು ಉಂಟಾಗಿ ಕಾಂಗ್ರೆಸ್ ಪಕ್ಷದ ಮೇಲೆ ಪರಿಣಾಮ ಬೀರಲಿದೆ.
ಕುಮಾರಸ್ವಾಮಿ ಕಣ್ಣೀರು ಹಾಕಲು ಅವರೇ ಕಾರಣ ಯಾರೇನು ಹೇಳಕ್ಕಾಗಲ್ಲ ಎಂದು ಖರ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.