ಪ್ರಮುಖ ಸುದ್ದಿ
‘ಪ್ರವಾಹ ಪ್ರವಾಸೋದ್ಯಮಕ್ಕೆ ಕಮಲ ಪಕ್ಷದ ಪ್ಲಾನ್’ – ಖರ್ಗೆ ವ್ಯಂಗ್ಯ
ಕಲಬುರಗಿ : ಬಿಜೆಪಿಗೆ ಆಪರೇಷನ್ ಕಮಲ ಮಾಡಲು ಸಾಕಷ್ಟು ಹಣವಿತ್ತು. ಮುಂಬೈಗೆ ಖಾಸಗಿ ವಿಮಾನಗಳಲ್ಲಿ ಓಡಾಡಲು, ಪಂಚತಾರಾ ಹೋಟೆಲ್ ಗಳಲ್ಲಿ ವಾಸ್ತವ್ಯ ಹೂಡಲು ಸಾಕಷ್ಟು ಹಣವಿತ್ತು. ಆದರೆ, ಪ್ರವಾಹ ಪೀಡಿತ ಪ್ರದೇಶಗಳಿಗೆ ನೀಡಲು ಮಾತ್ರ ಹಣವಿಲ್ಲ. ನೂರು ಕೋಟಿ ರೂಪಾಯಿ ಪ್ರವಾಹ ಪೀಡಿತ ಪ್ರದೇಶಗಳಿಗೆಲ್ಲಿ ಸಾಕಾಗುತ್ತೆ ಹೇಳಿ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಅಫಜಲಪುರ ತಾಲೂಕಿನ ಗಾಣಗಾಪುರ, ಘತ್ತರಗಿ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕಿಸಿದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಈ ಹಿಂದೆ ಬರ ಆವರಿಸಿದಾಗ ಬಿಜೆಪಿ ತಂಡ ರಾಜ್ಯ ಪ್ರವಾಸ ಮಾಡಿತ್ತು. ಆದ್ರೆ, ಈಗ ಪ್ರವಾಹ ಬಂದು ಇಷ್ಟು ದಿನಗಳು ಕಳೆದ ಬಳಿಕ ಪ್ರವಾಹ ಪ್ರವಾಸೋದ್ಯಮಕ್ಕೆ ಬಿಜೆಪಿ ನಾಯಕರು ತಂಡ ರಚಿಸಿ ಪ್ಲಾನ್ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.