ಪ್ರಮುಖ ಸುದ್ದಿ
BREAKING – ಮುಷ್ಕರ ವಾಪಸ್, ಉಪವಾಸ ಸತ್ಯಾಗ್ರಹ ನಿರಂತರ – ಕೋಡಿಹಳ್ಳಿ ಚಂದ್ರಶೇಖರ
BREAKING – ಸಾರಿಗೆ ನೌಕರರ ಮುಷ್ಕರ ವಾಪಸ್, ಉಪವಾಸ ಸತ್ಯಾಗ್ರಹ ನಿರಂತರ – ಕೋಡಿಹಳ್ಳಿ ಚಂದ್ರಶೇಖರ
ಬೆಂಗಳೂರಃ ಸಾರ್ವಜನಿಕರ ಹಿತಾಸಕ್ತಿ ಹಿನ್ನೆಲೆ ಸಾರಿಗೆ ನೌಕರರ ಮುಷ್ಕರ್ ವಾಪಸ್ ಪಡೆಯುತ್ತೇವೆ ಆದರೆ ಉಪವಾಸ ಸತ್ಯಾಗ್ರಹ ಮುಂದುವರೆಯಲಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರ ಮುಖಂಡರ ಜೊತೆ ಸಭೆ ನಡೆಸಿ ಮುಷ್ಕರ ವಾಪಸ್ ಪಡೆಯುವ ಕುರಿತು ಫ್ರೀಡಂಪಾರ್ಕ್ ನಲ್ಲಿ ಘೋಷಣೆ ಮಾಡಲಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಆದರೆ ಸಾರ್ವಜನಿಕರಿಗೆ ಪ್ರಯಾಣಿಸಲು ಅನಾನುಕೂಲ ವಾಗುತ್ತಿರುವ ಹಿನ್ನೆಲೆ ನಾಗರಿಕರ ಹಿತದೃಷ್ಟಿಯಿಂದ ಮುಷ್ಕರ ವಾಪಸ್ಪಡೆದು, ಸಾರಿಗೆ ನೌಕರರ ಪ್ರಮುಖ ಬೇಡಿಕೆ ಈಡೇರಿಸುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರೆಸಲಿದ್ದೇವೆ ಎಂದು ಅವರು ತಿಳಿಸಿದರು.