ಕೊರೊನಾ ವೈರಸ್ನಿಂದ ಆ ಒಂದು ದೇಶ ಸರ್ವನಾಶ – ಕೋಡಿಮಠ ಶ್ರೀ ಭವಿಷ್ಯ
ಕೊರೊನಾ ಕುರಿತು ಕೋಡಿಮಠದ ಶ್ರೀ ಏನ್ ಹೇಳಿದ್ದಾರೆ ಗೊತ್ತಾ.?
ವಿವಿ ಡೆಸ್ಕ್ ಃ ಮಹಾಮಾರಿ ಕೊರೊನಾ ವೈರಸ್ ಜಗತ್ತಿನಾದ್ಯಂತ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ ತಗೆದುಕೊಳ್ಳುತ್ತಿದೆ. ಆದರೆ ಈ ಕೊರೊನಾ ಹಾವಳಿಗೆ ಕೊನೆ ಎಂದು ಎಂಬ ಪ್ರಶ್ನೆಗೆ ಕೋಡಿಮಠದ ಶ್ರೀಗಳು ನುಡಿದ ಭವಿಷ್ಯ ಮತ್ತಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ನಿಜ ಈ ಹೆಮ್ಮಾರಿ ಕೊರೊನಾ ಸೋಂಕು ಪ್ರಪಂಚದಾದ್ಯಂತ ತನ್ನ ಕದಂಬಬಾಹು ಚಾಚುತ್ತಿದೆ. ಈ ವೈರಸ್ನಿಂದ ಒಂದು ದೇಶ ಸರ್ವನಾಶವಾಗಲಿದೆ ಜಗತ್ತಿನ ಭೂಪಟದಲ್ಲಿಯೇ ಆ ದೇಶ ಅಳಿದು ಹೋಗಲಿದೆ ಎಂದು ಶ್ರೀಗಳು. ಅದ್ಯಾವ ದೇಶವೆಂದು ಹೆಸರು ಹೇಳಿಲ್ಲ.
ಆದರೆ ಭಾರತ ದೇಶಕ್ಕೆ ಗಂಡಾಂತರವೇನಿಲ್ಲ. ಈ ಭೂಮಿಯಲ್ಲಿ ಸಾಧು ಸಂತರು ಜನ್ಮಿಸಿ ಜಪ ತಪ ಮಾಡಿದ ಪವಿತ್ರ ನೆಲ ಇದಾಗಿದೆ. ಆ ಹಿನ್ನೆಲೆಯಲ್ಲಿ ಅವರ ಶ್ರೀರಕ್ಷೆ ನಮ್ಮ ಭಾರತದ ಮೇಲಿದೆ. ಕೊರೊನಾ ನಿಯಂತ್ರಣ ಕಷ್ಟ. ಆದರೆ ಭಾರತದವರು ಭಯ ಪಡಬೇಕಿಲ್ಲ. ಪ್ರಕೃತಿಯಲ್ಲಿಯೇ ಇದಕ್ಕೆ ಮದ್ದಿದೆ ಎಂದು ಅವರು, ಇದರಿಂದಾಗಿ ಕೆಲವು ಅರಸರು ಪಟ್ಟ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.