ಪ್ರಮುಖ ಸುದ್ದಿ

ಕುಮಾರಸ್ವಾಮಿ ಕೈಯಲ್ಲಿದೆ ನಿಂಬೆಕಾಯಿ..ಏನಿದರ ಕರಾಮತ್ತು ಗೊತ್ತೆ.?

ಯಾದಗಿರಿಃ ಜಿಲ್ಲೆಯ ಶಹಾಪುರ ನಗರದ ಜೆಡಿಎಸ್ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಟಿ ವೇಳೆ ಜೆಡಿಎಸ್ ರಾಜ್ಯಧ್ಯಕ್ಷ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ತಮ್ಮ ಕೈಯಲ್ಲಿ ನಿಂಬೆಕಾಯಿ ಹಿಡಿದುಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಬಾರಿ ಸುದ್ದಿಯಾಗಿದೆ.

ಕೈಯಲ್ಲಿ ನಿಂಬೆ ಕಾಯಿ ಹಿಡಿದುಕೊಂಡೆ ಸುದ್ದಿಗೋಷ್ಠಿ ಮುಗಿಸಿರುವುದು ಹಲವರಲ್ಲಿ ಆಶ್ಚರ್ಯ ಮೂಡಿಸಿದ್ದು ನಿಜ. ಆದರೆ ಅದಕ್ಕಾಗಿ ಹಲವಾರು ಕಥೆ ಕಟ್ಟುವ ಅಗತ್ಯವಿಲ್ಲ. ಕುಮಾರಸ್ವಾಮಿ ಅವರಾಗಲಿ ಅವರ ತಂದೆ ಮಾಜಿ ಪ್ರಧಾನಿ ದೇವೆಗೌಡರಾಗಲಿ ಧಾರ್ಮಿಕವಾಗಿ ಸಾಕಷ್ಟು ನಂಬಿಕೆಯುಳ್ಳವರಾಗಿರುವ ಕಾರಣ, ದೈವಿ ಶಕ್ತಿ ರೂಪದಲ್ಲಿ ಅವರು ಕೈಯಲ್ಲಿ ನಿಂಬೆಕಾಯಿ ಹಿಡಿದುಕೊಂಡಿರಬಹುದು.

ಇಲ್ಲವೆ ಕುಮಾರಸ್ವಾಮಿಯವರ ಆರೋಗ್ಯ ಸರಿಯಿಲ್ಲದ್ದರಿಂದ ನಿಂಬೆಕಾಯಿ ವಾಸನೆ ಪಡೆಯುವ ಹಿನ್ನೆಲೆಯಲ್ಲಿ ಕೈಯಲ್ಲಿ ಹಿಡಿದಿರಬಹುದು. ಆದರೆ ನಿಂಬೆ ಹಣ್ಣಿನ ವಾಸನೆ ಸೇವನೆ ಮಾಡುವುದು ಎಲ್ಲೂ ಕಂಡು ಬರಲಿಲ್ಲ ಎಂಬ ಪ್ರಶ್ನೆಗಳು ಜನ ಕೇಳಬಹುದು.

 

ಎಲ್ಲದಕ್ಕಿಂತ ಮುಖ್ಯವಾಗಿ ನಿಂಬೆ ಹಣ್ಣಿನಲ್ಲಿ ಹಿಂದೂ ಶಾಸ್ತ್ರದ ಪ್ರಕಾರ ದೈವಿಕ ಶಕ್ತಿ ಅಡಗಿದೆ. ಹಲವಾರು ಧಾರ್ಮಿಕ ಕಾರ್ಯಕ್ರಮಗಳಿಗೆ ನಿಂಬೆಕಾಯಿ ಬಳಕೆ ಮಾಡುವುದು ಕಾಣಬಹುದು. ಅಷ್ಟೇ ಏಕೆ ಅಮಾವಾಸ್ಯೆ ಇತರೆ ನೂತನ ವಾಹನಗಳ ಪೂಜೆ ಸಂದರ್ಭದಲ್ಲಿ ನಿಂಬೆಕಾಯಿಯನ್ನು ವಾಹನಗಳ ಚಕ್ರದ ಬುಡದಲ್ಲಿ ಇಟ್ಟು ಚಲಾಯಿಸುವ ಮೂಲಕ ನಿಂಬೆಯನ್ನು ಹೊಡೆದು ಹಾಕುವ ಮೂಲಕ ದುಷ್ಟಶಕ್ತಿ ತೊಲಗಿತು ಎಂಬ ಭಾವನೆ ಧಾರ್ಮಿಕ ಆಚರಣೆ ಮಾಡುವವರಲ್ಲಿದೆ.

ನಿಂಬೆ ಹಣ್ಣು ಮಕ್ಕಳಿಗೆ ಇಳಿಸಿ ಬಿಸಾಕುವುದು, ಮತ್ತು ಮನೆ ಪ್ರಮುಖ ಬಾಗಿಲಲ್ಲಿ ಹೊಸ್ತಿಲ ಎರಡು ಬದಿಯಲ್ಲಿ ನಿಂಬೆಯನ್ನು ಎರಡು ತುಂಡಾಗಿಕತ್ತರಿಸಿ ಕುಂಕುಮ ಹಾಕಿ ಇಡುವುದು ಕಂಡಿದ್ದೇವೆ. ಇದರಿಂದ ದುಷ್ಟಶಕ್ತಿ ನಿಗ್ರಹಕ್ಕಾಗಿ ಬಳಕೆ ಮಾಡುವುದು ನಾವು ಕಂಡಿದ್ದೇವೆ ನೋಡಿದ್ದೇವೆ.

ಮತ್ತು ಆಹಾರ ರೂಪದಿ ನಿಂಬೆಯನ್ನು ಅಡುಗೆ ಮನೆಯಲ್ಲಿ ಜಾಸ್ತಿ ಬಳಕೆಯಲ್ಲಿರುವು ನಮಗೆ ಗೊತ್ತು. ನಿಂಬೆ ಹಲವಾರು ಆಯಾಮಗಳಿಗೆ ಬಳಕೆಯಾಗುತ್ತದೆ. ಹೀಗಾಗಿ ಕುಮಾರಸ್ವಾಮಿಯವರು ಯಾವ ಆಯಾಮ, ರೂಪದಲ್ಲಿ ಬಳಕೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಯಾವುದೇ ವಿಚಾರಕ್ಕೆ ಬಳಕೆಯಾಗಲಿ ಕುಮಾರಸ್ವಾಮಿ ಸೇರಿದಂತೆ ಜನತೆಗೆ ರಾಜ್ಯಕ್ಕೆ ಒಳ್ಳೆಯದಾಗಲಿ ಎಂಬುದೇ ಸುದ್ದಿಯ ಸಾರಂಶ.

Related Articles

Leave a Reply

Your email address will not be published. Required fields are marked *

Back to top button