ಪ್ರಮುಖ ಸುದ್ದಿ
ಸಿಎಂ ಭೇಟಿ ವೇಳೆ ಸಂತ್ರಸ್ಥರ ಮೇಲೆ ಪೊಲೀಸರ ಲಾಠಿ ಪ್ರಹಾರ!
ಗದಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಪೀಡಿತ ಪ್ರದೇಶಗಳ ಪರಿಸ್ಥಿತಿ ಅವಲೋಕಿಸಿದರು. ಇದೇ ಸಂದರ್ಭದಲ್ಲಿ ನರಗುಂದ ತಾಲೂಕಿನ ಕೊಣ್ಣೊರು ಗ್ರಾಮದಲ್ಲಿ ಗ್ರಾಮಸ್ಥರು, ಪ್ರವಾಹ ಪೀಡಿತ ಸಂತ್ರಸ್ಥರು ಪ್ರವಾಹದ ಪರಿಣಾಮಗಳ ಕುರಿತು ಸಿಎಂಗೆ ಮನವರಿಕೆ ಮಾಡಿಕೊಡಲು ತಾಮುಂದು ನಾಮುಂದು ಎಂದು ಮುಗಿಬಿದ್ದರು. ಪರಿಸ್ಥಿತಿ ನಿಯಂತ್ರಿಸುವ ಭರದಲ್ಲಿ ಪೊಲೀಸರು ಸಿಎಂ ಎದುರಿನಲ್ಲೇ ಸಂತ್ರಸ್ಥರ ಮೇಲೆ ಲಾಠಿಚಾರ್ಚ್ ನಡೆಸಿದ ಘಟನೆ ನಡೆದಿದೆ.
ಬಳಿಕ ಗ್ರಾಮಸ್ಥರೆಲ್ಲಾ ಸೇರಿ ಪೊಲೀಸ್ ವ್ಯಾನ್ ಗೆ ಮುತ್ತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರನ್ನು ಸಮಾಧಾನ ಪಡಿಸುವಲ್ಲಿ ಪೊಲೀಸರು ಹೈರಾಣಾಗಿದ್ದು ಸಿಎಂ ಇರುವ ಕಾರಣಕ್ಕೆ ಪರಿಸ್ಥಿತಿ ನಿಯಂತ್ರಿಸುವ ಭರದಲ್ಲಿ ವ್ಯತ್ಯಾಸವಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿ ಗ್ರಾಮದಿಂದ ಮುನ್ನಡೆದಿದ್ದಾರೆ.