ಕಥೆ

‘ಮಾನಸಿ ಮತ್ತು ಆಶಿಶ್’ ಮಂಜುನಾಥ ಸಾಲಿಮಠರ ಕಥಾಂಕುರ ಭಾಗ-4

 

ಮಾನಸಿ ಅನುಭವಿಸುವ ಮಾನಸಿಕ ಯಾತನೆ ತಮ್ಮನಿಗೆ ಅರ್ಥವಾದಿತೇ.? 

ಅಕ್ಕ ಸ್ನೇಹಿತರ ಜೊತೆಗ ಓದುತ್ತಿದ್ದೆ ಎಂದು ಹೇಳುವಾಗ ಆಶಿಶನ ಬಾಯಿಯಿಂದ ಬಂದ ದುರ್ವಾಸನೆ ಮಾನಸಿಗೆ ಉಬ್ಬಳಿಕೆ ತಂದಿತ್ತು. ಏನಿದೂ ವಾಸನೆ ಕುಡಿದಿದ್ದೀಯಾ.? ಇಲ್ಲಕ್ಕಾ ಸ್ನೇಹಿತರೆಲ್ಲಾ ಬಲವಂತ ಮಾಡಿ ಕುಡಿ ಕುಡಿ ಎಂದರು ಅದಕ್ಕೆ ಚಿಕ್ಕ ಗ್ಲಾಸ್ ಟೀ ಕುಡಿತೀವಿ ಅಲ್ಲಾ ಅಷ್ಟು ಕುಡಿದೆ ಅಷ್ಟೇ ಎಂದಾ, ಕುಸಿದು ಹೋದಳು ಮಾನಸಿ ಅವನಿಗಾಗಿ ಊಟ ಮಾಡದೇ ಕುಳಿತಿದ್ದ ಅವಳನ್ನು ಊಟ ಮಾಡಿದೀಯಾ ಎಂದು ಕೇಳದೇ ನನ್ನ ಊಟ ಆಗಿದೆ ಎಂದು ಮಹಡಿ ಏರಿದ, ನನ್ನ ತಮ್ಮ ನಾನು ಸಾಕಿದ ತಮ್ಮ ಇವನೇನಾ..? ಎಂದುಕೊಂಡಳು.

ಮಾನಸಿ ಬಂದು ಹಾಸಿಗೆಯಲ್ಲಿ ಉರುಳಿ ಮೌನವಾಗಿ ಅತ್ತಳು. ಮಧುವಿಗೆ ಇದೆಲ್ಲಾ ಗೊತ್ತಾಗಬಾರದು ಗೊತ್ತಾದರೆ ಏನೆಂದು ತಿಳಿಯುತ್ತಾರೆ, ಅವರ ನಂಬಿಕೆಗೆ ಮಸಿ ಬಳೆದನಲ್ಲಾ, ಇದಕ್ಕೆನಾ ನಾನು ಇಷ್ಟು ದಿನ ಕಾಪಾಡಿದ್ದು, ಇವನು ಹೀಗಾಗುತ್ತಾನೆ ಎಂದು ಗೊತ್ತಿದ್ದರೆ ಅಪ್ಪನ ಬಳಿ ಬಿಟ್ಟುಬರುತ್ತಿದ್ದೆನೆಲ್ಲಾ ಎಂದು ಸಂಕಟಪಟ್ಟಳು.

ಬೆಳಿಗ್ಗೆ ಎದ್ದ ಆಶು ಎಂದಿನಂತೆ ಕಾಲೇಜಿಗೆ ಹೊರಡಲು ತಯಾರಾಗಿ ನಿಂತು ಅಕ್ಕಾ….. ತಿಂಡಿ ಕೊಡು ಎಂದು ಕೂಗಿದ, ತಿಂಡಿಯನ್ನು ಟೇಬಲ್ ಮೇಲೆ ಹಿಡದೆ ಅವನ ರೂಂಗೆ ತೆಗೆದುಕೊಂಡು ಹೋದಳು ಮಾನಸಿ, ಪ್ಲೇಟ್‍ನಲ್ಲಿದ್ದ ತಿಂಡಿಯನ್ನು ಗಬಗಬನೆ ತಿನ್ನುವದನ್ನು ಕಂಡು ಯಾಕೋ ರಾತ್ರಿ ಊಟ ಮಾಡಿಲ್ಲಾ ಎಂದು ಕೇಳಿದಳು. ಇಲ್ಲಾಕ್ಕಾ ಎಂದ, ಮತ್ತೆ ಸುಳ್ಳು ಹೇಳಿದ್ದೀಯಾ ಊಟ ಮಾಡಿದೆ ಎಂದಾಗ ಹೌದಕ್ಕ ನಿನ್ನ ಎದುರು ನಿಂತು ಮಾತನಾಡುವಷ್ಟು ದೈರ್ಯ ಇರಲಿಲ್ಲಾ, ಅದಕ್ಕೆ ಹಾಗೇ ಹೇಳಿದೆ ಅಕ್ಕ. ಇನ್ನಾವತ್ತು ಹೀಗೆ ಮಾಡಲ್ಲಾ, ಪ್ಲೀಸ್ ನನ್ನ ನಂಬು ಎಂದು ಅವಳ ಕಾಲಿಗೆ ನಮಸ್ಕರಿಸಿದ, ಅವನನ್ನು ಎತ್ತಿ ಮಾನಸಿ ಅಲ್ಲಾ ಪುಟ್ಟಾ ಆಗಿದ್ದು, ಆಯ್ತು ನೀನು ಇನ್ಮೇಲೆ ಮಾಡಲ್ಲಾ ಎಂದು ಹೇಳಿದೆಯೆಲ್ಲಾ ಅಷ್ಟೆ ಸಾಕು ಮುಂದೆ ಹೀಗೆ ಮಾಡಬೇಡ.

ನಿನ್ನ ಭಾವನಿಗೆ ತಿಳಿದರೆ ನಿನ್ನ ಸುಮ್ಮನೆ ಬೀಡಲ್ಲಾ, ಅವರಂತೂ ಎಷ್ಟು ಕಟ್ಟುನಿಟ್ಟಾಗಿದ್ದಾರೆ ನೋಡು. ಅಡಿಕೆ ಕೂಡ ತಿನ್ನುವವರಲ್ಲಾ ಹಾಗಿದ್ದ ಮೇಲೆ ನೀನು ಕುಡಿದು ಬಂದರೆ ಸುಮ್ಮನೆ ಬೀಡ್ತಾರಾ,..ಪ್ಲೀಸ್ ನನ್ನ ಮುಖ ನೋಡು ನನ್ನ ತಲೆ ಮೇಲೆ ಆಣೆ ಮಾಡು ಕುಡಿಯಲ್ಲಾ ಅಂತಾ ಎಂದಾಗ ಮಗಳು ಗೌತಮಿ ರೂಂಗೆ ಬಂದು ಅಮ್ಮ ಮಾಮನ ಬೈಕ್ ಮೇಲೆ ನನ್ನನ್ನು ಸ್ಕೂಲಗೆ ಬೀಡೊಕೆ ಹೇಳು. ಇವತ್ತು ನಾನು ಬೇಗ ಹೋಗಬೇಕು ಎಂದು ನಿಂತಳು. ಮಗಳ ಮುಂದೆ ಬೇರೆನು ಹೇಳದೆ ಇಬ್ಬರನ್ನು ಕಳಿಸಿ ಒಳಗೆ ಬಂದಳು ಮಾನಸಿ.

ಮಧು ಎಂದಿನಂತೆ ಎದ್ದು ತಯಾರಾಗಿ ತಿಂಡಿ ತಿಂದು ಕೆಲಸಕ್ಕೆ ಹೊರಟು ನಿಂತಾ, ಖಿನ್ನಳಾಗಿದ್ದ ಮಾನಸಿಯನ್ನು ಗಮನಿಸಿ ಯಾಕೇ ಹುಷಾರಿಲ್ವಾ ಅಷ್ಟೊಂದು ಕೆಲಸ ಮಾಡಬೇಡ ಅಂದ್ರೂ ಕೇಳಲ್ಲಾ, ಎಲ್ಲಾ ನೀನೆ ಮಾಡಿ ಸುಸ್ತಾಗ್ತೀಯಾ, ಯಾರಾದರೂ ಕೆಲಸದವ್ರು ಸಿಗುತ್ತಾರೇನು ಪಕ್ಕದ ಮನೆಯವರನ್ನು ಕೇಳು ಎಂದು ಹೇಳಿ ಹೊರಟುಹೋದ.

ಇನ್ನು ಮುಂದೆ ಹಾಗೆ ಮಾಡಲ್ಲಾ ಅಕ್ಕ ಎಂದಿದ್ದ ತಮ್ಮನನ್ನು ನಂಬಿದ್ದಳು ಮಾನಸಿ. ಆಶುಗೆ ಹೆಚ್ಚು ದುಡ್ಡು ಕೋಡಬೇಡಿ ಎಂದು ಮಧುಗೆ ಹೇಳಬೇಕು ಎಂದುಕೊಳ್ಳುತ್ತಾ ಮನೆಗೆಲಸ ಮುಗಿಸಿ ರಾತ್ರಿ ಬರದಿದ್ದ ನಿದ್ದೆಗೆ ಶರಣಾದಳು. ಎಚ್ಚರವಾದಾಗ ಎರಡು ಗಂಟೆಯಾಗಿತ್ತು. ಕಾಲಿಂಗ್ ಬೆಲ್ ಹೊಡೆದುಕೊಳ್ಳುತ್ತಿತ್ತು ಮಧು ಬಂದಿದ್ದ, ಊಟಕ್ಕೆ ಅಣಿಗೊಳಿಸಲು ಅಡುಗೆ ಮನೆ ಕಡೆ ಹೋದಳು, ಊಟ ಮಾಡುವಾಗ ಮಕ್ಕಳ ಬಗ್ಗೆ ವಿಚಾರಿಸಿ ಮಧು ಮಗಳನ್ನು ಬೇರೆ ಶಾಲೆಗೆ ಸೇರಿಸಬೇಕು. ಇಲ್ಲಿ ಸರಿಯಾಗಿ ಹೇಳಿಕೊಡುವುದಿಲ್ಲಾ ಎಂದು ಎಲ್ಲರೂ ಹೇಳುತ್ತಾರೆ ಎನ್ನುತ್ತಾ ಕೈತೊಳೆದು ಹತ್ತು ನಿಮಿಷ ಮಲಗಲೆಂದು ಕೊಠಡಿಗೆ ಹೊರಟರು.

ಅವಳು ಸುಮ್ಮನಿದ್ದಿದ್ದು ಕಂಡು ಏನಾಗಿದೆ.. ಇವಳಿಗೆ ಇತ್ತಿಚೇಗೆ ಏನನ್ನು ಸರಿಯಾಗಿ ಹೇಳುತ್ತಿಲ್ಲಾ. ಏನು ಕೊರತೆಯಿದೆ ಎಂದು ಅರಿಯಲಾಗದೆ ಸುಮ್ಮನೆ ಮಲಗಿದ ನಿದ್ದೆ ಬರಲಿಲ್ಲಾ ಎದ್ದು ಮತ್ತೆ ಕೆಲಸಕ್ಕೆ ಹೋಗಲು ಸಿದ್ಧನಾದ.

ಹೊರಟು ನಿಂತ ಮಧುವನ್ನು ಕಳಿಸಿ ಮಾನಸಿ ಕೆಲಸದಲ್ಲಿ ತೊಡಗಿದಳು. ಇನ್ನೇನು ನಾಲ್ಕು ಗಂಟೆಗೆ ಸರಿಯಾಗಿ ಮಗಳು ಅಟೋದಲ್ಲಿ ಬಂದು ಬಿಡುತ್ತಾಳೆ ಅವಳಿಗೆ ಏನಾದರೂ ತಿನ್ನಲು ಕೊಡಬೇಕು ಇಲ್ಲದಿದ್ದರೆ ಡುಮ್ಮಿಯ ಗಲಾಟೆ ಕೇಳಲಾಗುವದಿಲ್ಲಾ ಎಂದು ಈರುಳ್ಳಿ ಎಚ್ಚುತ್ತಾ ನಿಂತಳು, ಕಣ್ಣಿನಿಂದ ನೀರು ಸುರಿಯುತ್ತಿತ್ತು ಈರುಳ್ಳಿಯ ಘಾಟವೋ ಮನದಲ್ಲಿನ ದುಃಖವೋ ತಿಳಿಯೆಲ್ಲಾ, ಮಗಳಿಗೆಂದು ಮ್ಯಾಗಿ ಮಾಡಿ ಹಾಟ್ ಬಾಕ್ಸ್‍ನಲ್ಲಿ ಹಾಕಿದಳು, ಹೊರಗೆ ಅಟೋ ಬಂದ ಶಬ್ದವಾಯಿತು..(ಮುಂದುವರೆಯುವುದು.)

 ಲೇಖಕರುಃಮಂಜುನಾಥ ಸಾಲಿಮಠ

ಪತ್ರಕರ್ತರು ಮಸ್ಕಿ.

ಓದುಗರ ಗಮನಕ್ಕೆಃ ‘ವಿನಯವಾಣಿ’ ಕಥಾ ವಿಭಾಗದಲ್ಲಿ ಭಾಗ-1 ಭಾಗ-4 ರವರೆಗೆ ಈ ಕಥೆಯನ್ನು ಓದಬಹುದು.

Related Articles

Leave a Reply

Your email address will not be published. Required fields are marked *

Back to top button