ಮಾತೆಯ ಪಾರ್ಥೀವ ಶರೀರ ಶಿವಲಿಂಗದೊಳು ಇಡಲಾಗುತ್ತೆ.!
ಹಿಂದೂ ವಿಧಿವಿಧಾನ ಪ್ರಕಾರ ಮಾತೆ ಮಾಣಿಕೇಶ್ವರಿಗೆ ಅಂತಿಮ ವಿದಾಯ
ಕಲಬುರ್ಗಿಃ ಜಿಲ್ಲೆಯ ಸೇಡಂ ತಾಲೂಕಿನ ಸುಕ್ಷೇತ್ರ ಯಾನಾಗುಂದಿಯ ಮಾಣಿಕ್ಯಗಿರಿಯ ಮಾಣಿಕೇಶ್ವರಿ ತಾಯಿಯ ಶಿಲಾ ಮಂಟಪದ ಗುಹೆಯಲ್ಲಿ ಅಮ್ಮನವರಿಗೆ ಹಿಂದೂ ಧರ್ಮದ ವಿಧಿವಿಧಾನ ಪ್ರಕಾರ ಅಂತಿಮ ವಿದಾಯ ವ್ಯವಸ್ಥೆ ಮಾಡಲಾಗಿದೆ ಎಂದು ಮಾಣಿಕೇಶ್ವರಿ ಟ್ರಸ್ಟ್ ನ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ವೇದ ಶಾಸ್ತ್ರೋಕ್ತವಾಗಿ ಅಂತಿಮ ಕಾರ್ಯ ವ್ಯವಸ್ಥೆ ಮಾಡಲಾಗಿದ್ದು, 10-15 ಜನ ಸ್ವಾಮೀಜಿಗಳು ಅಂತಿಮ ವಿಧಿವಿಧಾನ ಕಾರ್ಯ ನೆರವೇರಿಸಲಿದ್ದಾರೆ.
12 ಅಡಿ ಗುಹೆಯಲ್ಲಿ ಸ್ಥಾಪಿಸಿರುವ 5 ಅಡಿ ಎತ್ತರದ ಶಿವಲಿಂಗದ ಒಳಾಂಗಣದಲ್ಲಿ ಮಾತೆಯ ಪಾರ್ಥೀವ ಶರೀರ ಇರಿಸಲಾಗುವದು.
ಅಲ್ಲದೆ ಮಾತೆ ಶಿವಧ್ಯಾನದಲ್ಲಿಯೇ ಜೀವಂತ ಸಮಾಧಿಯಾಗುವ ಇಚ್ಛೆಯಿಂದ ಗುಹೆ ನಿರ್ಮಿಸಿ ಲಿಂಗ ಪ್ರತಿಷ್ಠಾಪನೆ ಮಾಡಿದ್ದರು. 30 ವರ್ಷದ ಹಿಂದೆ ಗುಹೆ ನಿರ್ಮಿಸಿ ಅನುಷ್ಠಾನ ಗೈಯುತ್ತಾ ಬಂದಿದ್ದರು.
ಅಂತಿಮ ಕಾರ್ಯಕ್ಕೆ 5 ಸಾವಿರ ವಿಭೂತಿ ಸೇರಿದಂತೆ ಅಗತ್ಯ ವಸ್ತುಗಳನ್ನು ಆಶ್ರಮದಲ್ಲಿ ಈಗಾಗಲೇ ಸಂಗ್ರಹಿಸಲಾಗಿದೆ ಸಮರ್ಪಕ ಸಿದ್ಧತೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮಾತೆಯವರ ಶರೀರಕ್ಕೆ ಅಭಿಷೇಕ ನೆರವೇರಿಸಲಾಗುವದು ಎಂದರು.