ಮಾರ್ಕ್ಸ್ವಾದಿಗಳು ರಚಿಸಿದ ಭಾರತದ ಇತಿಹಾಸ ಸತ್ಯವಾ.? ನಂಬಬೇಕಾ.?
ಸಂಪರ್ಕದಲ್ಲಿರೋಣ..
ಜಗತ್ತು ಒಳ್ಳೆಯವರಿಂದ ತುಂಬಿದೆ ನಾವು ಹುಡುಕಬೇಕಷ್ಟೆ..
ಭಾರತದ ಇತಿಹಾಸ ರಚಿಸಿದವರು ಮಾರ್ಕ್ಸ್ವಾದಿಗಳು. ಅವರ ಭಾರತದ ಕಲ್ಪನೆ ರೂಪುಗೊಂಡಿದ್ದು ಭಾರತ ಮತ್ತು ಹಿಂದು ದ್ವೇಷಗಳಿಂದ. ಹೀಗಿರುವಾಗ ಇಲ್ಲಿನ ಇತಿಹಾಸ ರಚನಾಕಾರರು ತಿರುಚಿದ ಇತಿಹಾಸವನ್ನಲ್ಲದೆ ಮತ್ತೇನನ್ನು ಉಣಬಡಿಸಿಯಾರು ಹೇಳಿ.
ತಮ್ಮ ಸಿದ್ಧಾಂತ ಪ್ರವರ್ತಕ ಮಾರ್ಕ್ಸ್ನನ್ನು ಸತ್ಯ ಮಾಡಲೆಂದೇ ಇವರೆಲ್ಲ ಭಾರತೀಯವಾದುದನ್ನು ಹಳಿದರು. ಗಾಂಧಿಜಿ ಭಾರತದ ಅಂತಃಸತ್ತ್ವವನ್ನು ಅರಿತಿದ್ದವರು. ಅನೇಕ ಬಾರಿ, ಮೇಲ್ನೋಟಕ್ಕೆ ಕಾಣುವ ಸಂಗತಿಗಳಿಗೆ ಪ್ರತಿಕ್ರಿಯಿಸುತ್ತಲೇ ನಮ್ಮ ಆಯಸ್ಸು ಕಳೆದುಹೋಗುತ್ತದೆ.
ಗಾಂಧಿಜಿ ಭಾರತದ ಹೃದಯಕ್ಕೆ ಕಿವಿಯಿಟ್ಟು ಆಲಿಸಿದವರು. ಅದಕ್ಕೇ ಗಾಂಧಿಜಿಯವರನ್ನು ಮಣಿಸಲು ಬ್ರಿಟಿಷರು ಅವರ ಸುತ್ತಮುತ್ತಲಿನವರನ್ನೇ ತೆಕ್ಕೆಗೆ ಸೆಳೆದುಕೊಂಡು ಗಾಂಧಿಜಿಯವರ ಹೋರಾಟವನ್ನು ಮೂಲೆ ಗುಂಪಾಗಿಸಬೇಕಾಯ್ತು.
ಗಾಂಧಿಜಿ ನಿಜಕ್ಕೂ ಬ್ರಿಟಿಷರಿಗೆ ಬಹುದೊಡ್ಡ ಸವಾಲೇ ಆಗಿದ್ದರು. 1931ರ ಅಕ್ಟೋಬರ್ 20ರಂದು ದುಂಡುಮೇಜಿನ ಸಭೆಯಲ್ಲಿ ಭಾರತದ ಭವಿಷ್ಯದ ಕುರಿತಂತೆ ಮಾತನಾಡಿದ ಗಾಂಧಿಜಿ ಬಿಳಿಯರಿಗೆ, ಅವರ ಕೃತ್ಯಗಳಿಗೆ ಕೈಗನ್ನಡಿಯಾಗಿ ನಿಂತುಬಿಟ್ಟಿದ್ದರು.
ಭಾರತೀಯ ಶಿಕ್ಷಣ ವ್ಯವಸ್ಥೆಯ ಕುರಿತಂತೆ ಮತ್ತು ಅದನ್ನು ವಿರೂಪಗೊಳಿಸಿರುವ ಬಿಳಿಯರ ನೀತಿಯ ಕುರಿತಂತೆ ಮಾತಾಡುತ್ತ, ‘ಭಾರತ ಕಳೆದ 50 ಅಥವಾ 100 ವರ್ಷಗಳ ಹಿಂದೆ ಇದ್ದುದಕ್ಕಿಂತ ಇಂದು ಹೆಚ್ಚು ಅನಕ್ಷರಸ್ಥ ದೇಶವಾಗಿದೆ’ ಎಂದು ಆರೋಪಿಸಿದರಲ್ಲದೇ ಅದಕ್ಕೆ ಪೂರಕವಾಗಿ ಅನೇಕ ಸಂಗತಿಗಳನ್ನು ಉದಾಹರಿಸುತ್ತ ತಾನು ಹೇಳಿದ್ದನ್ನು ಸಮರ್ಥಿಸಿಕೊಳ್ಳುವಲ್ಲಿ ಯಾವ ಅಳುಕೂ ಇಲ್ಲವೆಂದೂ, ಯಾರು ಬೇಕಾದರೂ ಇದನ್ನು ಸವಾಲಾಗಿ ಸ್ವೀಕರಿಸಬಹುದೆಂದೂ ಪಂಥಾಹ್ವಾನ ನೀಡಿದರು.
ಸ್ವಾಮಿ ವಿವೇಕಾನಂದರ ನಂತರ ಯುರೋಪಿನಲ್ಲಿ ಅತ್ಯಂತ ಪ್ರಭಾವಿ ಭಾರತೀಯರಾಗಿದ್ದವರು ಗಾಂಧಿಜಿಯೇ. ಹೀಗಾಗಿ ಅವರ ಮಾತುಗಳು ಬಲುಬೇಗ ಜನಜನಿತವಾದವು. ಭಾರತೀಯರು ಅನಾಗರಿಕರು ಮತ್ತು ಅನಕ್ಷರಸ್ಥರೆಂಬ ಮಿಷನರಿಗಳ ಗಿಣಿಪಾಠವನ್ನು ಈಗ ಸಾಬೀತು ಮಾಡಲು, ಗಾಂಧಿಜಿಯನ್ನು ಸುಳ್ಳೆಂದು ಜರಿಯುವವರು ಬೇಕೇ ಬೇಕಿತ್ತು.
ಭಾರತೀಯ ಶಿಕ್ಷಣ ಪದ್ಧತಿಯ ಶ್ರೇಷ್ಠತೆ: ಸ್ಕೂಲ್ ಆಫ ಓರಿಯಂಟಲ್ ಸ್ಟಡೀಸ್ನ ಸ್ಥಾಪಕನೂ, ಢಾಕಾ ವಿಶ್ವವಿದ್ಯಾಲಯದ ಕುಲಪತಿಯೂ ಅಲ್ಲದೆ ಭಾರತದ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಬೇರೆ ಬೇರೆ ಹುದ್ದೆಯನ್ನು ಅಲಂಕರಿಸಿದ ಸರ್ ಫಿಲಿಪ್ ಹರ್ಟಾಗ್ ಈ ಸವಾಲನ್ನು ಸ್ವೀಕರಿಸಲು ಮುಂದೆ ಬಂದ.
ಗಾಂಧಿಜಿಯೊಂದಿಗೆ ವಾಗ್ವಾದಕ್ಕೆ ತೊಡಗಿದ. ಗಾಂಧಿಜಿ ತಾವು ‘ಯಂಗ್ ಇಂಡಿಯಾ’ಕ್ಕೆ ಆಧಾರ ಸಹಿತವಾಗಿ ಬರೆದ ಲೇಖನವನ್ನು ಅವನ ಕೈಲಿಟ್ಟರು. ಅವನಿಗೆ ತೃಪ್ತಿಯಾಗಲಿಲ್ಲ. ಭಾರತೀಯ ಶಿಕ್ಷಣ ಪದ್ಧತಿಯ ಶ್ರೇಷ್ಠತೆಯನ್ನು ಅವನ ಸುಪ್ತಪ್ರeಯೂ ನಿರಾಕರಿಸಿಬಿಟ್ಟಿತ್ತು.
ಬರಿಯ ಹರ್ಟಾಗನಷ್ಟೇ ಅಲ್ಲ ವಿಲಿಯಂ ವಿಲ್ಬರ್ ಫರ್ಸ್, ಮೆಕಾಲೆಯಂತಹ ಅನೇಕರು ಅಂಥದ್ದೇ ಮಾನಸಿಕ ಸ್ಥಿತಿ ಉಳ್ಳವರಾಗಿದ್ದರು. ವಿಲ್ಬರ್ ಫರ್ಸ್ ‘ಭಾರತೀಯರು ಧಾರ್ಮಿಕ ಮೂಢನಂಬಿಕೆಗಳ ಕಬಂಧಬಾಹುಗಳಲ್ಲಿ ಸಿಲುಕಿ ನಲುಗುತ್ತಿದ್ದಾರೆ.
ಇಲ್ಲಿನವರ ನೈತಿಕ, ಸಾಮಾಜಿಕ ನಡವಳಿಕೆಗಳು ತೀರಾ ಕೆಳಮಟ್ಟದಲ್ಲಿರುವುದರಿಂದ ಅವರು ಉದ್ಧಾರವಾಗುತ್ತಿಲ್ಲ’ ಎನ್ನುವಾಗಿನ ಅವನ ಧಿಮಾಕು ಹದಗೆಟ್ಟ ಮಾನಸಿಕತೆಯಿಂದ ಹುಟ್ಟಿದ್ದೇ.
1500ನೇ ಇಸ್ವಿಯ ನಂತರ ಅಮೆರಿಕಾವನ್ನು ಆಕ್ರಮಿಸಿಕೊಂಡಮೇಲೆ ಯುರೋಪಿಯನ್ನರು ಅಲ್ಲಿನ ಮೂಲನಿವಾಸಿಗಳನ್ನು ಅಗಾಧ ಸಂಖ್ಯೆಯಲ್ಲಿ ಕೊಂದು ಬಿಸಾಡಿದರಲ್ಲ ಅದು ನೈತಿಕತೆಯ ಪರಾಕಾಷ್ಠೆಯೇ ಎಂಬುದನ್ನು ಅವರೆಂದಿಗೂ ಒರೆಗೆ ಹಚ್ಚಿ ನೋಡಲೇ ಇಲ್ಲ. ಬಿಳಿಯರು ಕರಿಯರಿಗಿಂತ ಶ್ರೇಷ್ಠ ಎಂಬ ಏಕೈಕ ನಂಬಿಕೆಯಿಂದಲೇ ಇತರರನ್ನು ಬದುಕಲು ಬಿಡದ ಅವರ ಸಾಮಾಜಿಕ ನಡವಳಿಕೆಯನ್ನು ವಿಲ್ಬರ್ ಫರ್ಸ್ ಥರದವರು ಪ್ರಶ್ನಿಸಿಕೊಳ್ಳಹೋಗಲೇ ಇಲ್ಲ.
ಇವನಂಥವನೇ ಜೇಮ್ಸ್ ಮಿಲ್ ಕೂಡ. 1817ರಲ್ಲಿ ಅವನು ಬರೆದ ‘ಹಿಸ್ಟರಿ ಆಫ ಬ್ರಿಟಿಷ್ ಇಂಡಿಯಾ’ ಇಂತಹುದ್ದೇ ಅಪದ್ಧಗಳ ಸಂಕಲನ. ‘ಅಸ್ಥಿರತೆ, ಅಪ್ರಾಮಾಣಿಕತೆ, ಅನೈತಿಕತೆ, ಲಂಚಕೋರತನ ಇವು ಭಾರತೀಯರ ಸೂಕ್ಷ್ಮಗುಣಗಳಾಗಿವೆ.
ಹಿಂದುಯೇತರರಾದರೋ ಸಂಪತ್ತು ಬಂದರೆ ಸಂತೋಷವಾಗಿರಬಲ್ಲರು. ಹಿಂದುಗಳು ಮಾತ್ರ ಯಾವಾಗಲೂ ದರಿದ್ರರು, ಬೈರಾಗಿಗಳು’ ಎನ್ನುತ್ತಾನೆ ಮಿಲ್ ಮಹಾಶಯ.
ಇವನಂಥವನನ್ನು ಓದಿಕೊಂಡೇ ಭಾರತದ ಕುರಿತು ಅಭಿಪ್ರಾಯ ರೂಪಿಸಿಕೊಂಡ ಕಾರ್ಲ್ಮಾರ್ಕ್ಸ್ ‘ಭಾರತೀಯ ಜೀವನವು ಯಾವಾಗಲೂ ಅನಾಗರಿಕ, ಸ್ಥಗಿತ, ಅನೈಸರ್ಗಿಕ ಹಾಗೂ ಋಣಾತ್ಮಕ ಧೋರಣೆಯನ್ನುಳ್ಳದ್ದಾಗಿತ್ತು’ ಎನ್ನುತ್ತಾನೆ.
ತಿರುಚಿದ ಇತಿಹಾಸ: ಈಗ ಎಲ್ಲವನ್ನೂ ತಾಳೆಹಾಕಿ ನೋಡಿ. ಭಾರತದ ಇತಿಹಾಸ ರಚಿಸಿದವರು ಮಾರ್ಕ್ಸ್ವಾದಿಗಳು. ಅವರ ಭಾರತದ ಕಲ್ಪನೆ ರೂಪುಗೊಂಡಿದ್ದು ಭಾರತ ಮತ್ತು ಹಿಂದು ದ್ವೇಷಗಳಿಂದ. ಹೀಗಿರುವಾಗ ಇಲ್ಲಿನ ಇತಿಹಾಸ ರಚನಾಕಾರರು ತಿರುಚಿದ ಇತಿಹಾಸವನ್ನಲ್ಲದೆ ಮತ್ತೇನನ್ನು ಉಣಬಡಿಸಿಯಾರು ಹೇಳಿ.
ತಮ್ಮ ಸಿದ್ಧಾಂತ ಪ್ರವರ್ತಕ ಮಾರ್ಕ್ಸ್ನನ್ನು ಸತ್ಯ ಮಾಡಲೆಂದೇ ಇವರೆಲ್ಲ ಭಾರತೀಯವಾದುದನ್ನು ಹಳಿದರು. ಇಲ್ಲಿನ ಪರಂಪರೆ, ಆಚರಣೆಗಳನ್ನು ಹೀಗಳೆದರು. ನಾವೂ ದಶಕಗಳ ಕಾಲ ಅದನ್ನೇ ಓದುತ್ತ ನಂಬಿದೆವು. ಅದನ್ನೇ ಆಧಾರವಾಗಿರಿಸಿಕೊಂಡು ಹೊಸ ಹೊಸ ಸಿದ್ಧಾಂತಗಳ ಮಂಡಿಸಿದೆವು! ನಮ್ಮ ಪ್ರಾಚೀನ ಶಿಕ್ಷಣ ವ್ಯವಸ್ಥೆಯ ಕುರಿತಂತೆ ಆದದ್ದೂ ಇದೇ!
ಹೇಗಿತ್ತು ನೋಡಿ ಸ್ಥಳೀಯ ಶಿಕ್ಷಣ: ಗಾಂಧಿಜಿ ದುಂಡುಮೇಜಿನ ಪರಿಷತ್ತಿನಲ್ಲಿ ಸವಾಲೆಸೆಯುವ ಬಲು ಮುನ್ನವೇ 1822ರಲ್ಲಿ ಥಾಮಸ್ ಮನ್ರೋ ದೇಶದ ಬೇರೆ ಬೇರೆ ಭಾಗದ ಕಲೆಕ್ಟರುಗಳಿಗೆ ಪತ್ರ ಬರೆದು ಸ್ಥಳೀಯ ಶಿಕ್ಷಣದ ಕುರಿತಂತೆ ಒಂದಷ್ಟು ಮಾಹಿತಿ ಕೇಳಿದ್ದ. ಈ ಪತ್ರದ ಮೊದಲ ಸಾಲು ಹೇಗಿತ್ತು ಗೊತ್ತೇ?ಫ ‘ಇಂಗ್ಲೆಂಡಿನಲ್ಲಿ ಮತ್ತು ಭಾರತದಲ್ಲಿಯೂ ಭಾರತೀಯರ ದಡ್ಡತನದ ಕುರಿತಂತೆ ಮತ್ತು ಅವರಿಗೆ ಜ್ಞಾನ ನೀಡುವ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆದಿವೆ’ ಎಂದಿದ್ದ. ಭಾರತೀಯರು ದಡ್ಡರೆಂದು ಅವರು ಮಾನಸಿಕವಾಗಿ ನಿಶ್ಚಯಿಸಿಯಾಗಿತ್ತು. ಇದನ್ನು ಸಾಬೀತು ಪಡಿಸಲೆಂದೇ ಆತ ದಾಖಲೆಗಳನ್ನು ಬಯಸಿದ್ದ.
ಇದಕ್ಕೆ ಉತ್ತರವಾಗಿ ಕೆಲವರು ಶ್ರಮವಹಿಸಿ ದಾಖಲೆಗಳನ್ನು ಸಂಗ್ರಹಿಸಿದ್ದರು; ಮತ್ತೂ ಕೆಲವರು ಕಾಟಾಚಾರದಿಂದ ಕೆಲವು ಸಾಲು ಗೀಚಿ ಕಳಿಸಿದ್ದರು. ಮತ್ತದೇ ‘ದಡ್ಡ ಭಾರತೀಯರ ಶಿಕ್ಷಣ’ವೆಂಬ ಅಸಡ್ಡೆ. ಬಳ್ಳಾರಿಯ ಕಲೆಕ್ಟರ್ ಎಡಿ ಕಾಂಟ್ಬೆಲ್ ಬರೆದ ಪತ್ರ ಬಹುಮೂಲ್ಯವಾದುದು. ಆತ ಹೇಳುತ್ತಾನೆ, ‘ಹಿಂದುಗಳ ಮಕ್ಕಳಿಗೆ ಐದು ತುಂಬಿದಾಗ ಶಾಲೆಗೆ ಕಳುಹಿಸುವುದಕ್ಕೆ ತೊಡಗುತ್ತಾರೆ. ವಿದ್ಯಾರ್ಥಿಯ ಮನೆಗೇ ಮಾಸ್ತರರನ್ನು ಕರೆತರಲಾಗುತ್ತದೆ.
ಪ್ರತಿಯೊಬ್ಬರೂ ಗಣಪತಿಯ ಎದುರಿಗೆ ವೃತ್ತಾಕಾರವಾಗಿ ಕುಳಿತುಕೊಳ್ಳುತ್ತಾರಾದರೂ ಕಲಿಕೆ ಶುರುಮಾಡುವ ವಿದ್ಯಾರ್ಥಿಯನ್ನು ಗುರುಗಳೆದುರಿಗೆ ಕೂರಿಸಲಾಗುತ್ತದೆ. ಗಣಪತಿಯ ಪ್ರಾರ್ಥನೆಯ ನಂತರ ಗುರುಗಳು ವಿದ್ಯಾರ್ಥಿಯಿಂದ ಅಕ್ಕಿಯಲ್ಲಿ ಓಂಕಾರ ಬರೆಯಿಸಿ ಶಿಕ್ಷಣ ಆರಂಭಿಸುತ್ತಾರೆ. ಶಾಲೆಯಲ್ಲಿ ಕೆಲವರು 5 ವರ್ಷ ಮಾತ್ರ ಕಲಿಯುತ್ತಾರೆ’ ಹೀಗೆ ಆತ ತನ್ನ ಪಾಲಿನ ವರದಿ ಒಪ್ಪಿಸುತ್ತಾನೆ.
ತಮ್ಮ ಶಿಕ್ಷಣದ ಬಗ್ಗೆ ಅಪಾರವಾಗಿ ಕೊಚ್ಚಿಕೊಳ್ಳುವ ಯುರೋಪಿಯನ್ನರ ಪರಿಸ್ಥಿತಿ ಆಗ ಹೇಗಿತ್ತು ಗೊತ್ತೇ? 1835ರಲ್ಲಿ ಮಕ್ಕಳು ಶಾಲೆ ಕಲಿಯುತ್ತಿದ್ದ ಅವಧಿಯು ಕೇವಲ ಒಂದು ವರ್ಷಕ್ಕ್ಕೆ ಸೀಮಿತವಾಗಿತ್ತು.
ಅದು 1851ರಲ್ಲಿ ಎರಡು ವರ್ಷಕ್ಕೆ ಮಾತ್ರವೇ ಏರಿತ್ತು. ಅದು ಕೂಡ ಭಾನುವಾರ ಮಾತ್ರ 2ರಿಂದ 3 ಗಂಟೆಗಳ ಕಾಲ ಶಾಲೆಗೆ ಹೋಗುವವರು! ಅಷ್ಟೇ ಅಲ್ಲ, 1835ರ ವೇಳೆಗೂ ಇಂಗ್ಲೆಂಡಿನ ಕೆಲವು ಶಾಲೆಗಳಲ್ಲಿ ಬರವಣಿಗೆಯನ್ನು ಕೆಡುಕೆಂದು ಭಾವಿಸಿ ಕೈಬಿಡಲಾಗಿತ್ತು ಎಂಬುದಂತೂ ಯುರೋಪಿನ ಶಿಕ್ಷಣ ಪದ್ಧತಿಗೆ ಹಿಡಿದ ಕೈಗನ್ನಡಿ.
ನಮ್ಮಲ್ಲಾದರೋ ಶಿಕ್ಷಣ ಶುರುವಾಗುತ್ತಿದ್ದುದೇ ಓಂಕಾರ ಬರೆಯುವುದರಿಂದ!
ಬಳ್ಳಾರಿಯ ಕಲೆಕ್ಟರ್ ತನ್ನ ಪತ್ರದಲ್ಲಿ ಮುಂದುವರಿಸಿ, ಬೆಳಗ್ಗೆ 6 ಗಂಟೆಗೆ ಶುರುವಾಗುವ ಶಾಲೆಯ ಕುರಿತಂತೆ, ಮಕ್ಕಳು ಬಳಸುವ ಸ್ಲೇಟುಫಬಳಪಗಳ ಕುರಿತಂತೆ ವಿವರಿಸುವುದಲ್ಲದೇ ‘ಅಕ್ಷರಾಭ್ಯಾಸ ಮಾಡಿದ ಮೇಲೆ ವಿದ್ಯಾರ್ಥಿಯು ಕಾಗುಣಿತವನ್ನು ಕಲಿಯುತ್ತಾನೆ.
ಆಮೇಲೆ ನಾಮಪದಗಳು. ಬಳಿಕ ಲೆಕ್ಕಪಾಠ, ಆಮೇಲೆ ಮಗ್ಗಿ. ಅನಂತರ ಸುಲಭವಾಗಿ ಕೂಡುವ, ಕಳೆಯುವ, ಗುಣಾಕಾರ, ಭಾಗಾಕಾರ ಮತ್ತು ಅಳತೆ ಪ್ರಮಾಣಗಳನ್ನು ಕಲಿಸಲಾಗುತ್ತದೆ. ದಿನಕ್ಕೊಮ್ಮೆ ಎದ್ದುನಿಂತು ಸಾಲಾಗಿ ಕಲಿತ ಎಲ್ಲವನ್ನೂ ಸಮರ್ಪಕವಾಗಿ ಒಪ್ಪಿಸಲೇಬೇಕಾಗುತ್ತದೆ’ ಎನ್ನುತ್ತಾನೆ.
ಅಲ್ಲಿ ಕಲಿಸುತ್ತಿದ್ದ ವ್ಯಾಕರಣ ಸಂಬಂಧಿ, ಧರ್ಮಸಂಬಂಧಿ ಕೃತಿಗಳ ಉಲ್ಲೇಖ ಮಾಡುವ ಆತ ಸ್ವತಃ ಇಂಗ್ಲೆಂಡಿಗೊಂದು ಸಲಹೆ ಕೊಡುತ್ತಾನೆಫ ‘ಹೆಚ್ಚು ಜಾಣರಾದವರು ಕಡಿಮೆ ಜಾಣರಾದವರಿಗೆ ಕಲಿಸುವುದರಿಂದ ಅವರ ಜ್ಞಾನವೂ ಏಕಕಾಲಕ್ಕೆ ಹೆಚ್ಚಾಗುತ್ತದೆ. ಇದು ಮೆಚ್ಚತಕ್ಕದ್ದು. ಇಂಗ್ಲೆಂಡಿನಲ್ಲಿಯೂ ನಾವಿದನ್ನು ಅನುಸರಿಸಬಹುದು’.
ಗುಂಟೂರಿನ ಕಲೆಕ್ಟರ್ ಜೆ.ಸಿ. ವಿಶ್, ವಿದ್ಯಾರ್ಥಿಗಳು ಶಾಲೆಗೆ ಹೋಗುವ ಸಮಯದ ಬಗ್ಗೆ ಬರೆದಿದ್ದಾರೆ.
ಅವರ ಪ್ರಕಾರ ‘ಸಾಮಾನ್ಯವಾಗಿ ವಿದ್ಯಾರ್ಥಿಗಳು ಬೆಳಗ್ಗೆ 6 ಗಂಟೆಗೆ ಶಾಲೆಗೆ ಬರುತ್ತಾರೆ. ಹಾಗೆಯೇ ಬೆಳಗ್ಗೆ 9 ಗಂಟೆಯವರೆಗೆ ಶಾಲೆಯಲ್ಲಿದ್ದು ಉಪಾಹಾರಕ್ಕೆ ಮನೆಗೆ ಹೋಗುತ್ತಾರೆ. ಮತ್ತೆ 11 ಗಂಟೆಗೆ ಮರಳಿ ಶಾಲೆಗೆ ಬರುತ್ತಾರೆ. ಮಧ್ಯಾಹ್ನ 3ರವರೆಗೆ ಶಾಲೆಯಲ್ಲಿದ್ದು ಊಟಕ್ಕೆ ಹೋಗುತ್ತಾರೆ. ಅನಂತರ ಸಂಜೆ ನಾಲ್ಕರಿಂದ ಏಳರವರೆಗೆ ಮತ್ತೆ ಶಾಲೆಯಲ್ಲಿರುತ್ತಾರೆ.
ಸಾಮಾನ್ಯವಾಗಿ ಬೆಳಗ್ಗೆ ಮತ್ತು ಸಂಜೆಯ ವೇಳೆಗೆ ಓದುತ್ತಿರುತ್ತಾರಾದರೆ, ಮಧ್ಯಾಹ್ನದ ವೇಳೆ ಬರವಣಿಗೆಯಲ್ಲಿ ತೊಡಗುತ್ತಾರೆ’. ಬಲು ವೈಜ್ಞಾನಿಕವಾದ ಮಾದರಿ ಇದು. ಇಂಗ್ಲೆಂಡು ಆಗಿನ್ನೂ ವಿಜ್ಞಾನ ಮತ್ತು ಬೈಬಲ್ಲುಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಹೆಣಗಾಡುತ್ತಿತ್ತು.
ಶಿಕ್ಷಣದ ಮಹತ್ವ ಮನಗಂಡಿತ್ತು ಸಮಾಜ: ಪ್ರಾಥಮಿಕ, ಪ್ರೌಢಶಾಲೆಗಳಷ್ಟೇ ಅಲ್ಲ. ವೇದಾಂತ, ಕಾನೂನು, ಜ್ಯೋತಿಷ ಮೊದಲಾದ ಉನ್ನತ ವಿದ್ಯೆ ಕಲಿಸುವ ಖಾಸಗಿ ವಿದ್ಯಾಲಯಗಳು ಸುಮಾರು 171 ಕಡೆಗಳಲ್ಲಿ ಗುಂಟೂರು ಜಿಲ್ಲೆಯಲ್ಲಿಯೇ ಇತ್ತೆಂದು ಅವನ ವರದಿ. ಸ್ಥಿತಿವಂತ ಪೋಷಕರು ತಾವೇ ಹಣಕೊಟ್ಟು ಮಕ್ಕಳನ್ನು ಅಧ್ಯಯನಕ್ಕೆ ಕಳಿಸಿದರೆ, ಬಡ ಪೋಷಕರ ಮಕ್ಕಳಿಗೆ ಆ ಹಳ್ಳಿಯೇ ಈ ಖರ್ಚನ್ನು ನಿಭಾಯಿಸುತ್ತಿತ್ತು.
ಇದು ಶಿಕ್ಷಣಕ್ಕೆ ಗ್ರಾಮಫಸಮಾಜಗಳು ಕೊಡುತ್ತಿದ್ದ ಮಹತ್ವ. ವಿದ್ಯಾರ್ಥಿಗಳು ಇನ್ನೂ ಆಳವಾಗಿ ಅಧ್ಯಯನ ಮಾಡಬೇಕೆಂದು ಬಯಸಿದರೆ ವಾರಾಣಸಿಗೋ, ನವದ್ವೀಪಕ್ಕೋ ಹೋಗಿ ಅಧ್ಯಯನ ಮಾಡುತ್ತಾರೆಂದು ವಿಶ್ ಉಲ್ಲೇಖಿಸುತ್ತಾನೆ.
ಈ ಎಲ್ಲಾ ದಾಖಲೆಗಳು ಅನೇಕ ದಶಕಗಳ ನಮ್ಮ ನಂಬಿಕೆಗೆ ಕೊಡಲಿಯ ಆಘಾತವೇ ಸರಿ. ಬ್ರಿಟಿಷ್ ಕಲೆಕ್ಟರುಗಳೇ ಕೊಡುವ ಇನ್ನೊಂದಷ್ಟು ಮಾಹಿತಿಗಳಂತೂ ಅನೇಕರ ನಿದ್ದೆ ಕೆಡಿಸುತ್ತವೆ. ಅನುಮಾನವೇ ಇಲ್ಲ.
ಸಾಧಾರಣವಾಗಿ ಭಾರತದಲ್ಲಿ ಶಿಕ್ಷಣವೆಂದರೆ ಉನ್ನತ ವರ್ಗದವರ ಸ್ವತ್ತೆಂದು ನಾವೆಲ್ಲ ಭಾವಿಸಿಕೊಂಡಿದ್ದೇವೆ. ಹಿಂದುಗಳ ವಿಷಯದಲ್ಲಂತೂ ಅದು ಬ್ರಾಹ್ಮಣರಿಗೆ ಮಾತ್ರ ಸಂಬಂಧಿಸಿದ್ದೆಂದು ನಮ್ಮೆಲ್ಲರ ಒಕ್ಕೊರಲ ಅಭಿಮತ. ಆದರೆ 1822ಫ25ರ ನಡುವಿನ ಅವಧಿಯ ದಾಖಲೆಗಳು ಬೇರೆಯದ್ದೇ ಕಥೆ ಹೇಳುತ್ತವೆ.
‘ತಮಿಳುನಾಡಿನಲ್ಲಿ ಬ್ರಾಹ್ಮಣ ವಿದ್ಯಾವಂತರ ಸಂಖ್ಯೆ ದಕ್ಷಿಣ ಆರ್ಕಾಟಿನಲ್ಲಿ ಕೇವಲ ಶೇ. 13ರಷ್ಟಿದ್ದರೆ, ಮದ್ರಾಸಿನಲ್ಲಿ ಅದು ಶೇ. 23ರಷ್ಟಿತ್ತು. ಶೂದ್ರರು ಮತ್ತು ಇತರ ಜಾತಿಗಳವರ ಶಿಕ್ಷಣ ಪ್ರಮಾಣ ದಕ್ಷಿಣ ಆರ್ಕಾಟಿನಲ್ಲಿ ಪ್ರತಿಶತ 84ರಷ್ಟಿದ್ದರೆ, ತಿರುನೆಲ್ವೇಲಿಯಲ್ಲಿ ಪ್ರತಿಶತ 70 ರಷ್ಟಿತ್ತು’. ಯಾವುದೋ ಒಂದು ರಾಜ್ಯವೆಂದು ಭಾವಿಸಬೇಡಿ.
ಕೇರಳದ ಮಲಬಾರಿನಲ್ಲಿ ಶೇ. 20ರಷ್ಟು ಬ್ರಾಹ್ಮಣ ವಿದ್ಯಾರ್ಥಿಗಳಾಗಿದ್ದರೆ ಶೂದ್ರ ಮತ್ತಿತರ ವಿದ್ಯಾರ್ಥಿಗಳ ಸಂಖ್ಯೆ ಶೇ. 54ರಷ್ಟಿತ್ತು! ಇನ್ನು ನಮ್ಮದೇ ಬಳ್ಳಾರಿಗೆ ಬಂದರೆ ಬ್ರಾಹ್ಮಣ ಮತ್ತು ವೈಶ್ಯ ವಿದ್ಯಾರ್ಥಿಗಳ ಪ್ರಮಾಣ ಸುಮಾರು ಶೇ. 33ರಷ್ಟಿದ್ದರೆ, ಶೂದ್ರರು ಮತ್ತು ಇತರೆ ಜಾತಿಗಳ ವಿದ್ಯಾರ್ಥಿಗಳ ಸಂಖ್ಯೆ ಶೇ. 63ರಷ್ಟು! ಆಂಧ್ರ, ಒಡಿಶಾಗಳಲ್ಲೂ ಇದೇ ಸ್ಥಿತಿಯಿದ್ದುದನ್ನು ಧರ್ಮಪಾಲ್ಜಿ ಲಭ್ಯ ದಾಖಲೆಗಳ ಮೂಲಕ ತಮ್ಮ ಕೃತಿಯಲ್ಲಿ ಸ್ಪಷ್ಟವಾಗಿ ನಮೂದಿಸುತ್ತಾರೆ.
ಹಾಗಂತ ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಮಾತ್ರ ಹೀಗಲ್ಲ. ಉನ್ನತ ಶಿಕ್ಷಣದಲ್ಲೂ ಬ್ರಾಹ್ಮಣರು ಕಡಿಮೆ ಸಂಖ್ಯೆಯಲ್ಲಿಯೇ ಇದ್ದರು. ಧರ್ಮಪಾಲರ ಪ್ರಕಾರ ಉನ್ನತ ಶಿಕ್ಷಣ ವೃತ್ತಿಪರತೆಯನ್ನು ಬಯಸುತ್ತಿದ್ದುದರಿಂದ ಬ್ರಾಹ್ಮಣರು ಅತ್ತ ತಲೆಹಾಕುವುದು ಕಡಿಮೆ ಮಾಡಿರಬೇಕು! ಮಲಬಾರಿನ ದಾಖಲೆಗಳ ಪ್ರಕಾರ 194 ಜನ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ 31 ಜನ ಮಾತ್ರ ಬ್ರಾಹ್ಮಣರು.
ಒಟ್ಟಾರೆ ಮದ್ರಾಸ್ ಪ್ರೆಸಿಡೆನ್ಸಿಯ ದಾಖಲೆಗಳು ಹೇಳುವುದನ್ನು ನಂಬುವುದಾದರೆ ವೈದ್ಯಕೀಯ ಶಸಚಿಕಿತ್ಸೆಯಲ್ಲಿಯೂ ಭಿನ್ನ ಭಿನ್ನ ಜಾತಿಯ ಜನರಿದ್ದರು. ಇನ್ನೂ ಅಚ್ಚರಿಯ ಸಂಗತಿಯೇನು ಗೊತ್ತೇ? ಬ್ರಿಟಿಷರ ಪ್ರಕಾರ ಕ್ಷೌರಿಕರೇ ಶಸ್ತ್ರಚಿಕಿತ್ಸೆಯನ್ನು ಮಾಡುವಲ್ಲಿ ನಿಷ್ಣಾತರಾಗಿದ್ದರು!
ಸತ್ಯ ಮನಗಾಣಬೇಕಿದೆ: ಅಬ್ಬಾ! ಇವೆಲ್ಲವನ್ನು ಈಗ ಓದುತ್ತಿದ್ದರೆ ಯಾವುದು ಸತ್ಯ, ಯಾವುದು ಸುಳ್ಳು ಎಂದು ವಿಂಗಡಿಸಲೂ ಸಾಧ್ಯವಿಲ್ಲದಷ್ಟು ದೂರಕ್ಕೆ ಬಂದಿದ್ದೇವೆ ಎನಿಸುತ್ತಲ್ಲವೇ? ಅಷ್ಟು ಆಳಕ್ಕೆ ಇಳಿದು ಎತ್ತರಕ್ಕೆ ಬೆಳೆದಿದ್ದ ಭಾರತೀಯ ಶಿಕ್ಷಣ ಈ ಹಂತಕ್ಕೆ ಬಂದದ್ದೇಕೆ? ಪ್ರಶ್ನೆಯಿದೆ.
ಗಂಭೀರವಾಗಿ ಕಾಡುವ ಪ್ರಶ್ನೆಯಿದೆ. ಉತ್ತರವೂ ಬ್ರಿಟಿಷರ ದಾಖಲೆಗಳಲ್ಲಿಯೇ ಹುದುಗಿದೆ! ಸತ್ಯ ಅರಸುವ ಮನಸ್ಥಿತಿಯಿಂದ ಕೂತರೆ ಅದು ಖಂಡಿತ ಕಣ್ಣಿಗೆ ರಾಚುತ್ತದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882