ಪ್ರಮುಖ ಸುದ್ದಿ

ಮಠಕ್ಕೆ ಕನ್ನ ಹಾಕಿ ದೇವರ ಚಿನ್ನಾಭರಣ ದೋಚಿದ ಕಳ್ಳರು!

ಬೆಳಗಾವಿ: ತಾಲೂಕಿನ ಬಡಕೊಳ್ಳಮಠದಲ್ಲಿ ನಾಗೇಂದ್ರ ಅಜ್ಜನವರ ಮೂಲ ಗದ್ದುಗೆಗೆ ಕನ್ನ ಹಾಕಿರುವ ಕಳ್ಳರು ಕಾಳಿಕಾ ದೇವಿಯ ಚಿನ್ನ, ಬೆಳ್ಳಿ ಆಭರಣ ದೋಚಿದ್ದಾರೆ. ಕಳೆದ ಬಾನುವಾರ ರಾತ್ರಿ ವೇಳೆ ಮಠಕ್ಕೆ ಕನ್ನ ಹಾಕಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದಾರೆ. ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ದಾಖಲಾಗಿದೆ.

ಸುಮಾರು 2ಲಕ್ಷ 40ಸಾವಿರ ಮೌಲ್ಯದ ಚಿನ್ನಾಭರಣ, 70ಸಾವಿರ ಮೌಲ್ಯದ 1ಕೆಜಿ ಬೆಳ್ಳಿಯ ಮುಖವಾಡ, 25ಸಾವಿರ ಮೌಲ್ಯದ ಬೆಳ್ಳಿ ಪಾದುಕೆ ಸೇರಿದಂತೆ ಲಕ್ಷಾಂತರ ಮೌಲ್ಯದ ನಗನಾಣ್ಯ ದೋಚಿ ಕಳ್ಳರು ಎಸ್ಕೇಪ್ ಆಗಿದ್ದಾರೆ. ಹಿರೇ ಬಾಗೇವಾಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆಂದು ತಿಳಿದು ಬಂದಿದೆ.

 

Related Articles

Leave a Reply

Your email address will not be published. Required fields are marked *

Back to top button