ಪ್ರಮುಖ ಸುದ್ದಿವಿನಯ ವಿಶೇಷ

ದೇಶದಲ್ಲಿ ಜನಿವಾರ ಒಂದೇ ಇದ್ದಿದ್ದರೆ ಎಲ್ಲರೂ ಒಂದೇ ಧರ್ಮದಲ್ಲಿರುತ್ತಿದ್ದೆವು- ಮಾದಾರ ಚನ್ನಯ್ಯಶ್ರೀ!

ಚಿತ್ರದುರ್ಗ : ನಮ್ಮ ಭಾರತ ದೇಶದಲ್ಲಿ ಹಿಂದಿನಿಂದಲೂ ಎಲ್ಲರಿಗೂ ಒಂದೇ ಜನಿವಾರ ಇದ್ದಿದ್ದರೆ ಬಹುಶ: ನಾವೆಲ್ಲರೂ ಒಂದೇ ಧರ್ಮದಲ್ಲಿ ಇರುತ್ತಿದ್ದೆವು ಎಂದು ಚಿತ್ರದುರ್ಗದಲ್ಲಿ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು. ನಗರದ ತ.ರಾ.ಸು ರಂಗಮಂದಿರದಲ್ಲಿ ನಡೆದ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಾತಿಗೊಬ್ಬ ಮಠಾಧೀಶರ ಅಗತ್ಯತೆ ಏನಿತ್ತು ಎಂದು ಕೇಳಿಬಂದ ಪ್ರಶ್ನೆಗೆ ಅವರು ಉತ್ತರಿಸಿದರು.

ದೇಶದಲ್ಲಿ ಹಿಂದಿನಿಂದ ಜನಿವಾರ ಒಂದೇ ಇದ್ದಿದ್ದರೆ ಎಲ್ಲರೂ ಒಂದೇ ಧರ್ಮಲ್ಲಿರುತ್ತಿದ್ದೆವು.  12ನೇ ಶತಮಾನದಲ್ಲಿ ಬಸವಣ್ಣ ಅವರು ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ಹುಟ್ಟಿದ ಜಾತಿ, ಕಟ್ಟಿದ ಜನಿವಾರ ಕಿತ್ತು ಬಂದರು. ಸ್ವಾತಂತ್ರಯುತ ಹೊಸ ಸಮಾಜ, ಸಮ ಸಮಾಜ ನಿರ್ಮಾಣಕ್ಕಾಗಿ ಬಸವಣ್ಣನವರು ಹೊರಟಾಗ ಅವರ ಜತೆ ಕೈಜೋಡಿಸಿದ ಶರಣ ಸಂಕುಲ ಮತ್ತವರ ಪ್ರತಿನಿಧಿಗಳು ಬಸವಣ್ಣನವರ ಆಶಯವನ್ನು ಮನೆ ಮತ್ತು ಮನಗಳಲ್ಲಿ ಚಾಚೂ ತಪ್ಪದೆ ಶರಣರ ತತ್ವ ಅಳವಡಿಸಿಕೊಂಡಿದ್ದರೆ, ಬಸವಣ್ಣನವರ ಇಷ್ಟಲಿಂಗ, ಅವರ ತತ್ವ ಆದರ್ಶಗಳನ್ನು ಪಾಲಿಸಿದ್ದರೆ ಬಹುಶ: ಈವತ್ತು ಮಾದಾರ ಚನ್ನಯ್ಯ ಸ್ವಾಮೀಜಿ, ಕಾಗಿನೆಲೆ ಪೀಠದ ಈಶ್ವರಾನಂದ ಶ್ರೀ, ಪಂಡಿತಾರಾಧ್ಯ ಶ್ರೀಗಳಂಥವರು ಈ ವೇದಿಕೆ ಮೇಲಿರಲು ಸಾಧ್ಯವಿರಲಿಲ್ಲ. ಬಸವಣ್ಣನವರ ಪ್ರತಿನಿಧಿಯಾದವರ ನೇತೃತ್ವದಲ್ಲೇ ನಾವೆಲ್ಲರೂ ಹೋಗುವ ಸಾಧ್ಯತೆ ಇತ್ತು ಎಂದರು.

ತ.ರಾ.ಸು ರಂಗಮಂದಿರದಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮಕ್ಕೆ ಚಾಲನೆ

ಆದರೆ, ಬಸವಣ್ಣನವರ ಆಶಯಕ್ಕೆ ಭಂಗವಾದ ಸಂದರ್ಭದಲ್ಲಿ 21ನೇ ಶತಮಾನದಲ್ಲಿ ನಾವು ಸಹ ಧಾರ್ಮಿಕ ಸ್ವಾತಂತ್ರ್ಯ ಪಡೆಯುವ ಕನಸು ಹುಟ್ಟಿದ್ದು ಆ ಕನಸಿನ ಭಾಗವಾಗಿ ನಾವೆಲ್ಲಾ ಬರಬೇಕಾಯಿತು. ಮುಂದೆಯೂ ಸಹ ಬಸವಣ್ಣನ ತತ್ವ ಅಳವಡಿಸಿಕೊಂಡ ಎಲ್ಲಾ ಮಠ ಮಾನ್ಯಗಳಲ್ಲಿ ಸಮಾನತೆ ಬಂದರೆ ನಾವು ಸಹ ಆ ಸಮಾಜದಲ್ಲಿ ಒಂದಾಗಲು ಸಾಧ್ಯವಾಗುತ್ತದೆ ಎಂದು ಬಸವಮೂರ್ತಿ ಮಾದಾರ ಚನ್ನಯಶ್ರೀ ಹೇಳಿದರು. ಸಾಣೇಹಳ್ಳಿಯ ತರಳಬಾಳು ಮಠದ ಡಾ.ಪಂಡಿತಾರಾಧ್ಯ ಶ್ರೀ, ಕಾಗಿನೆಲೆ ಗುರುಪೀಠದ ಈಶ್ವರಾನಂದಪುರಿ ಶ್ರೀ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಂವಾದದಲ್ಲಿ ಅನೇಕ ನಾಗರೀಕರು, ಪ್ರಗ್ನಾವಂತರು, ವಿಚಾರವಾದಿಗಳು ಭಾಗಿಯಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button