ಪ್ರಮುಖ ಸುದ್ದಿ
ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೆ ಎಂ.ಬಿ.ಪಾಟೀಲ್ ಆಕ್ಷೇಪ
ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಎಂ.ಬಿ.ಪಾಟೀಲ್ ಆಕ್ಷೇಪ
ವಿಜಯಪುರಃ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡಿರುವ ಕುರಿತು ನಾನು ಸ್ವಾಗತಿಸುವದಿಲ್ಲ. ಇದರಿಂದ ಸಮಾಜಕ್ಕೆ ಎಳಷ್ಟು ಲಾಭವಾಗಲ್ಲ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಎಂ.ಬಿ.ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವೀರಶೈವ-ಲಿಂಗಾಯತ ಸಮಾಜದ ಅಭಿವೃದ್ಧಿ ಹೊಂದಬೇಕಾದರೆ ಮೊದಲು ಶೇ.16 ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಲಿ. ಆಗ ಸಮುದಾಯದ ಹಿಂದುಳಿದವರ ಏಳ್ಗೆಗೆ ಸಹಕಾರವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ನಿಗಮ ರಚನೆ ಮಾಡಿದರೆ, ಸಾಲದು ಅಥವಾ 50 ಕೋಟಿ ನೀಡಿದರೂ ಉಪಯೋಗವಿಲ್ಲ ಕನಿಷ್ಠ 4 ರಿಂದ 5 ಸಾವಿರ ಕೋಟಿ ಅನುದಾನ ಕಲ್ಪಿಸಿದಲ್ಲಿ ಸಮುದಾಯದ ಕೆಳಮಟ್ಟದವರ ಅಭಿವೃದ್ಧಿಗೆ ಸಹಕಾರವಾಗಬಹುದು ಆಗ ನಾನೇ ಸ್ವಾಗತಿಸುತ್ತೇನೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.