ವಿನಯ ವಿಶೇಷ

ಮೆಜೆಸ್ಟಿಕ್ ನಲ್ಲಿ ಕ್ಯಾಮರಾಗಳು ಕಣ್ಮುಚ್ಚಿವೆ,‌ ಅಧಿಕಾರಿಗಳೂ ಕುರುಡಾಗಿದ್ದಾರೆ…!?

ಬೆಂಗಳೂರು: ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಿತ್ಯ ಲಕ್ಷಾಂತರ ಜನ ಸಂಚರಿಸುತ್ತಾರೆ. ಆದರೆ, ಅಧಿಕಾರಿಗಳು ಮಾತ್ರ ಜನರಿಗೆ ಭದ್ರತೆ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಪರಿಣಾಮ ಕಳೆದ ಒಂದು ವಾರದಲ್ಲಿ 15 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ನಡೆದಿವೆ. ಇನ್ನು ಕಣ್ಗಾವಲಾಗಿದ್ದ ಬಹುತೇಕ ಸಿಸಿಟೀವಿ ಕ್ಯಾಮರಾಗಳು ಕಣ್ಣು ಮುಚ್ಚಿ ಬಹುದಿನಗಳೇ ಕಳೆದಿವೆ. ಭದ್ರತಾ ಸಿಬ್ಬಂದಿ ಹುಡುಕಿದರೂ ಸಿಗೋದು ಕಷ್ಟ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಕೆಲ ಸಿಸಿಟಿವಿ ಕ್ಯಾಮರಾಗಳು ಕೆಟ್ಟು ವರ್ಷವೇ ಕಳೆಯುತ್ತ ಬಂದಿದೆ ಆದರೂ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಪರಿಣಾಮ, ಕಳ್ಳ-ಕಾಕರು ನಿರ್ಭೀತಿಯಿಂದ ಮೆಜೆಸ್ಟಿಕ್ ಅನ್ನೇ ಅಡ್ಡಯನ್ನಾಗಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಪ್ರಯಾಣಿಕರಿಗೆ ಸೂಕ್ತ ಭದ್ರತೆ ಒದಗಿಸಬೇಕಿದೆ ಎಂಬುದು ಜನರ ಆಗ್ರಹ ಆಗಿದೆ.

Related Articles

Leave a Reply

Your email address will not be published. Required fields are marked *

Back to top button