ಪ್ರಮುಖ ಸುದ್ದಿ

ಶಹಾಪುರಕ್ಕೆ ಆಧ್ಯಾತ್ಮಿಕ ಚಿಂತಕ ನಿರ್ಭಯಾನಂದ ಶ್ರೀ

ಖ್ಯಾತ ವಾಗ್ಮೀ ನಿರ್ಭಯಾನಂದ ಶ್ರೀ ಆಗಮನ

ಯಾದಗಿರಿ, ಶಹಾಪುರಃ ನಗರದ ಬಚಪನ್ ಪ್ಲೇ ಸ್ಕೂಲ್ ಹಾಗೂ ಲಿಟಲ್ ಫ್ಲಾವರ್ ಪಬ್ಲಿಕ್ ಸ್ಕೂಲ್ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಉದ್ಘಾಟಕರಾಗಿ ಗುರುವಾರ ನವೆಂಬರ್ 15 ರಂದು ನಗರಕ್ಕೆ ಆಧ್ಯಾತ್ಮಿಕ ಗುರು, ಖ್ಯಾತ ವಾಗ್ಮೀ ಶ್ರೀ ನಿರ್ಭಯಾನಂದ ಸ್ವಾಮೀಜಿ ಆಗಮಿಸಲಿದ್ದಾರೆ.

ಶ್ರೀ ಸ್ವಾಮಿ ವಿವೇಕಾನಂದರ ಚಿಕಾಗೊ ವಿಶ್ವ ಸಮ್ಮೇಳನದ 125ನೇ ವರ್ಷಾಚರಣೆಯ ಪ್ರಯುಕ್ತ ಶ್ರೀ ಸ್ವಾಮಿ ವಿವೇಕಾನಂದರ ತತ್ವಗಳನ್ನು ಉತ್ಕಟವಾಗಿ ಪ್ರೀತಿಸುತ್ತ ಮತ್ತು ಅಮೀತೋತ್ಸಾಹದಿಂದ ಪಸರಿಸುತ್ತಿರುವ ಶ್ರೀಗಳು ಅಂದು ಬೆಳಗ್ಗೆ 9 ಗಂಟೆಗೆ ಮಕ್ಕಳ ಪಾಲಕರಿಗಾಗಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಕಾರಣ ಪಾಲಕರು ಸಾರ್ವಜನಿಕರು ಆಗಮಿಸಬೇಕೆಂದು ಬಚಪನ್ ಶಾಲಾ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button