ಪ್ರಮುಖ ಸುದ್ದಿ
ಸಂವಿಧಾನ ಮತ್ತೆ ಬರೆಯುವ ಸ್ಥಿತಿ ಬಂದಿದೆಯೆಂದ ಬಿಜೆಪಿ ಶಾಸಕ ಮಾಧುಸ್ವಾಮಿ ಮಾತಿಗೆ ಕಿಡಿ
ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ವಿಶ್ವಾಸ ಮತ ಪ್ರಕ್ರಿಯೆ ಬಗ್ಗೆ ಮಾತನಾಡುವಲ್ಲಿ ಕಾಲಹರಣ ಮಾಡುತ್ತಿರುವ ಬಗ್ಗೆ ಹೇಳಿದ ಬಿಜೆಪಿ ಶಾಸಕ ಮಾಧುಸ್ವಾಮಿ ಸಂವಿಧಾನ ಮತ್ತೆ ಬರೆಯುವ ಸ್ಥಿತಿ ಬಂದಿದೆ ಎಂದರು. ಶಾಸಕ ಮಾಧುಸ್ವಾಮಿ ಅವರ ಮಾತಿಗೆ ಸಚಿವ ಪ್ರಿಯಾಂಕ ಖರ್ಗೆ, ಜಾರ್ಜ್ ಸೇರಿದಂತೆ ಕಾಂಗ್ರೆಸ್ , ಜೆಡಿಎಸ್ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದರು.