ಪ್ರಮುಖ ಸುದ್ದಿ

ಎನ್‍ಎಲ್‍ಬಿಸಿ ಕಾಲುವೆ ದುಸ್ಥಿತಿಃ ಅಧಿವೇಶನದಲ್ಲಿ ಗಮನ ಸೆಳೆದ ಶಾಸಕ ಗುರು ಪಾಟೀಲ್

 

ಶಹಾಪುರಃ ಎನ್‍ಎಲ್‍ಬಿಸಿ ಕಾಲುವೆ ದುಸ್ಥಿತಿ, ಶಾಶ್ವತ ಪರಿಹಾರಕ್ಕೆ ಆಗ್ರಹ

ಶಹಾಪುರಃ ನಾರಾಯಣಪುರ ಎಡದಂಡೆ ಕಾಲುವೆಯ 58 ರಿಂದ 65 ಕೀ.ಮೀವರೆಗಿನ ಕಾಲುವೆ ನಿರ್ಮಾಣವಾದಾಗಿನಿಂದಲೂ ಅಪಾಯಕಾರಿ ಪರಿಸ್ಥಿತಿ ಇದೆ. ಸದಾ ಕಾಲ ಈ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಕಾರಣ ಕೂಡಲೇ ಸರ್ಕಾರ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಶಾಸಕ ಗುರು ಪಾಟೀಲ್ ಶಿರವಾಳ ಅಧಿವೇಶನದಲ್ಲಿ ಪ್ರಶ್ನೆ ಮಾಡಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶಹಾಪುರ ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಯ ಕೃಷ್ಣಾ ಕಾಲುವೆ ದುಸ್ಥಿತಿ ಕುರಿತು ಅವರು ಗಮನ ಸೆಳೆದರು. ಶಾಸಕ ಶಿರವಾಳರ ಪ್ರಶ್ನೆಗೆ ಸಚಿವ ರಾಯರಡ್ಡಿಯವರು ಉತ್ತರಿಸಿ ಸಂಬಂಧಿಸಿದ ಸಚಿವರಿಗೆ ಈ ಕುರಿತು ಮಾಹಿತಿ ನೀಡುತ್ತೇನೆ. ಸಂಬಂಧಿತ ಅಧಿಕಾರಿಗಳ ಜೊತೆ ಮಾತನಾಡಿ ಕೂಡಲೇ ಶಾಶ್ವತ ಪರಿಹಾರ ಒದಗಿಸುವಂತೆ ಸೂಚಿಸಲಾಗುವುದು ಎಂದು ಉತ್ತರಿಸಿದ್ದಾರೆ.

ಈ ಮಧ್ಯೆ ಶಾಸಕ ಪಾಟೀಲ್, ಕಾಲುವೆ ಅಪಾಯಕಾರಿ ಬಗ್ಗೆ ಡಾ.ಬಾಳೇಕುಂದ್ರೆ ವರದಿ ನೀಡಿದ್ದು, ಆ ಬಗ್ಗೆ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಅಪಾರ ಪ್ರಮಾಣದ ನೀರು ಪೋಲಾಗುವದರ ಜೊತೆಗೆ ದುರಂತ ಸಂಭವಿಸುವ ಲಕ್ಷಣಗಳು ಕಂಡು ಬಂದಿವೆ. ಮುಂಬರುವ ದಿನಗಳಲ್ಲಿ ಯಾವುದೇ ಅನಾಹುತಕಾರಿ ಘಟನೆಗಳು ಸಂಭವಿಸಿದಲ್ಲಿ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಲ್ಲದೆ ಯೋಜನಾ ಕಾಮಗಾರಿಗಳ ಅನುಷ್ಠಾನಕ್ಕೆ ಸೂಕ್ತ ತಾಂತ್ರಿಕ ಸಲಹೆ ನೀಡಲು ರಚಿಸಲಾಗಿರುವ ತಾಂತ್ರಿಕ ಪರಿಣಿತರ ಸಮಿತಿಯ ಅಭಿಪ್ರಾಯ ಹಾಗೂ ಶಿಫಾರಸ್ಸುಗಳನ್ವಯ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಆಧುನೀಕರಣ ಉಪಕರಣಗಳನ್ನು ಬಳಸಿ ಶಾಶ್ವತ ಪರಿಹಾರವನ್ನು ಒಳಗೊಂಡ ಕಾಮಗಾರಿಯನ್ನು ಮೂಲ ಗುತ್ತಿಗೆದಾರರ ವತಿಯಿಂದಲೇ ನಿರ್ವಹಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ ಮೂಲ ಗುತ್ತಿಗೆದಾರರೆಂದರೆ ಯಾರು ಎಂದು ಶಾಸಕ ಗುರು ಪಾಟೀಲ್ ಸರ್ಕಾರದ ಮುಂದೆ ಪ್ರಶ್ನೆ ಇಟ್ಟಿದ್ದಾರೆ.

ನೀರಾವರಿ ಸಚಿವರ ಪರವಾಗಿ ಶಿಕ್ಷಣ ಸಚಿವ ರಾಯರಡ್ಡಿ ಅವರು ಉತ್ತರಿಸಿದ್ದು, ನೀರಾವರಿ ಸಚಿವರಿಗೆ ಈ ಕುರಿತು ಸಂಪೂರ್ಣ ಮಾಹಿತಿ ಇದೆ ನಾನು ಕೂಡ ತಿಳಿಸುತ್ತೇನೆ. ಡಾ.ಬಾಳಕುಂದ್ರೆ ವರದಿ ಪ್ರಕಾರ ಕಾರ್ಯ ನಿರ್ವಹಿಸುವಂತೆಯೂ ಹೇಳಲಾಗುವುದು. ಒಟ್ಟಾರೆ ಪದೇ ಪದೇ ಒಡೆಯುವ ಕಾಲುವೆ ದುರಸ್ಥಿಗೊಳಿಸುವ ಮೂಲಕ ರೈತಾಪಿ ಜನರಿಗೆ ಆಗುವ ತೊಂದರೆ ತಪ್ಪಿಸಲಾಗುವುದು. ನೀರು ಪೋಲಾಗದಂತೆ ಎಚ್ಚರಿಕೆವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

 

Related Articles

2 Comments

Leave a Reply

Your email address will not be published. Required fields are marked *

Back to top button