ಶಿಕ್ಷಕರ ಪ್ರತಿನಿಧಿ ಹೇಗಿರಬೇಕೆಂದು ಅಳೆದು ತೂಗಿ ಮತ ನೀಡಿ-ಚಿದಾನಂದ
1994 ರಿಂದಲೂ ವಿಧಾನ ಪರಿಷತ್ನಲ್ಲಿ ನಮೋಶಿಯವರದು ಶಿಕ್ಷಕರ ಪರ ಧ್ವನಿ
ಶಿಕ್ಷಕರ ಪ್ರತಿನಿಧಿ ಹೇಗಿರಬೇಕೆಂದು ಶಿಕ್ಷಕರೇ ನಿರ್ಣಯಿಸಲಿ-ಚಿದಾನಂದ ಪಾಟೀಲ್
yadgiri, ಶಹಾಪುರಃ ಒಂದು ರಾಷ್ಟ್ರ, ಒಂದು ಶಿಕ್ಷಣ, ಒಂದು ವೇತನ ಎನ್ನುವ ನೀತಿ ಜಾರಿಗೆ ದೇಶ ಸಜ್ಜಾಗಿದೆ. ಮಾಧ್ಯಮಿಕ ಶಿಕ್ಷಕರ ಸಂಘ ಹನ್ನೊಂದು ವರ್ಷಗಳ ಹಿಂದೆಯೇ ಈ ನೀತಿ ಜಾರಿಗೊಳಿಸಲು ಪ್ರತಿಪಾಧಿಸಿತ್ತು ಎಂದು ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿದಾನಂದ ಪಾಟೀಲ್ ತಿಳಿಸಿದರು.
ನಗರದ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಶಿಕ್ಷಕರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಕರ ಪ್ರತಿನಿಧಿ ಹೇಗಿರಬೇಕೆಂಬುದು ಶಿಕ್ಷಕರೇ ನಿರ್ಧರಿಸುವಂತಹದ್ದು, ಆ ಹಿನ್ನೆಲೆಯಲ್ಲಿ ನಾವು ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರ ಶಿಕ್ಷಕರ ಪ್ರತಿನಿಧಿಯನ್ನು ಆರಿಸಿಕೊಳ್ಳುವ ನಿಟ್ಟಿನಲ್ಲಿ ಮಾಧ್ಯಮಿಕ ಶಿಕ್ಷಕರ ಸಂಘ ಪ್ರಚಾರ ಕೈಗೊಂಡಿದೆ. ಬೇರಾವ ಚುನಾವಣೆಯಲ್ಲಿ ಭಾಗವಹಿಸದ ನಾವುಗಳು ಶಿಕ್ಷಕ್ಷರ ಪ್ರತಿನಿಧಿ ಆರಿಸಿಕೊಳ್ಳುವಲ್ಲಿ ಸಂಘ ಪ್ರಮುಖ ಪಾತ್ರವಹಿಸಲಿದೆ. ಆ ನಿಟ್ಟಿನಲ್ಲಿ ನಮ್ಮ ಪ್ರತಿನಿಧಿ ಹೇಹಗಿರಬೇಕು ಎಂಬುದನ್ನು ಅರಿತು ಸಮರ್ಪಕ ಅರ್ಹತೆ ಹೊಂದಿದ ಅಭ್ಯರ್ಥಿಗೆ ನಾವೆಲ್ಲ ಮತ ನೀಡಬೇಕಿದೆ.
ಹೀಗಾಗಿ 1994 ರಿಂದಲೂ ವಿಧಾನ ಪರಿಷತ್ನಲ್ಲಿ ಶಿಕ್ಷಕರ ಧ್ವನಿಯಾಗಿ ಹಲವಾರು ಸಮಸ್ಯೆಗಳಿಗೆ ಸ್ಪಂಧಿಸುವಲ್ಲಿ ಮೇರು ವ್ಯಕ್ತಿತ್ವ ಹೊಂದಿದ್ದ ಶಶೀಲ್ ಜಿ.ನಮೋಶಿಯವರು ಸಮರ್ಥ ಅಭ್ಯರ್ಥಿಯಾಗಿದ್ದು, ಎಲ್ಲಾ ಶಿಕ್ಷಕರು ನಮೋಶಿಯವರಿಗೆ ಮೊದಲ ಪ್ರಾಶಸ್ತ್ಯ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ರಾಷ್ಟ್ರೀಯ ವಿಚಾರಗಳನ್ನು ಹೊತ್ತುಕೊಂಡು ಮಾಧ್ಯಮಿಕ ಶಿಕ್ಷಕರ ಸಂಘ ಮುನ್ನಡೆದಿದೆ, ಆ ಹಿನ್ನೆಲೆ ಹೊಂದಿದ ನಮೋಶಿಯವರನ್ನು ನಾವೆಲ್ಲ ಬೆಂಬಲಿಸಬೇಕಿದೆ. ಹಲವಾರು ಹೋರಾಟಗಳ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅಲ್ಲದೆ ಕೋವಿಡ್-19 ಸಮಸ್ಯೆಯಿಂದ ಆತಂಕದಲ್ಲಿ ಸಿಲುಕಿದ ಖಾಸಗಿ ಶಾಲೆಯ ಶಿಕ್ಷಕರಿಗೆ ಪ್ಯಾಕೇಜ್ ಕೊಡಿಸುವ ನಿಟ್ಟಿನಲ್ಲಿ ಮೊದಲಿಗೆ ಹೋರಾಟ ಆರಂಭಿಸಿದವರು ನಮೋಶಿಯವರು, ಅನುದಾನ ರಹಿತ ಶಾಲೆಗಳಿಗೆ ಅನುದಾನ ಕೊಡಿಸುವ ನಿಟ್ಟಿನಲ್ಲಿ ಹೋರಾಟ ಮಾಡಿದವರು ನಮೋಶಿಯವರು ಹೀಗೆ ಹತ್ತಾರು ಹೋರಾಟದ ಮೂಲಕ ಶಿಕ್ಷಕರ ನೆರವಿಗೆ ನಿಂತಿದ್ದಾರೆ. ಸದಾ ಶಿಕ್ಷಕರ ಧ್ವನಿಯಾಗಿದ್ದ ಅವರನ್ನು ನಾವೆಲ್ಲ ಬಹುಮತದಿಂದ ಆರಿಸಿ ತರಬೇಕಿದೆ ಎಂದು ಮತಯಾಚಿಸಿದರು.
ಈ ಸಂದರ್ಭದಲ್ಲಿ ಮಹೇಶ ಬಸರಕೋಡ್, ಚಂದ್ರಶೇಖರ ಪಾಟೀಲ್, ಶಾಂತಮೂರ್ತಿ ಗೊಂಬಿಮಠ, ಅನಿಲಕುಮಾರ ಬಿರಾದಾರ, ವಿ.ಸತ್ಯಂ, ಬಸವರಾಜ ಬಿರಾದಾರ, ಪ್ರಾಚಾರ್ಯ ಮಲ್ಲಿಕಾರ್ಜುನ ಆವಂಟಿ ಉಪಸ್ಥಿತರಿದ್ದರು.