ಪ್ರಮುಖ ಸುದ್ದಿ

ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಮೋದಿ ಆರ್ಥಿಕ ಪ್ಯಾಕೇಜ್ ಘೊಷಣೆ

20 ಲಕ್ಷ ಕೋಟಿ ಪ್ಯಾಕೇಜ್ ಘೊಷಿಸಿದ ಮೋದಿ
ವಿವಿ‌ಡೆಸ್ಕ್ಃ ಭಾರತವನ್ನು ಆರ್ಥಿಕವಾಗಿ ಅಭಿವೃದ್ಧಿ ‌ಪಡಿಸಲು ಆರ್ಥಿಕ ಪ್ಯಾಕೇಜ್ ಘೋಷಿಸಿದ್ದು, ಮಾಧ್ಯಮ ವರ್ಗ, ಶ್ರಮಿಕರು‌ ಹಗಲಿರಳು ದುಡಿಯುವ ಮತ್ತು ಸಣ್ಣ‌ ಉದ್ಯಮಿಗಳು ಸೇರಿದಂತೆ ರೈತರು, ಕಾರ್ಮಿಕರ ಅಭಿವೃದ್ಧಿಗೆ ಅನುಕೂಲ ಕಲ್ಪಿಸಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಕೊರೊನಾ ಹಾವಳಿ ತಡೆಗೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ವಿರುದ್ಧ ಹೊರಾಟ ನಡೆಸುವಲ್ಲಿ ದೇಶ ವಿಶ್ವದಲ್ಲಿಯೇ ಹೆಚ್ಚಿನ ಸಫಲತೆ ಪಡೆದ ದೇಶ ಭಾರತ.‌ ಇಲ್ಲಿ ಎಲ್ಲರ ಸಹಭಾಗಿತ್ವವಿದೆ.‌ 4 ನೇ ಲಾಕ್ ಡೌನ್ ಹೊಸರೂಪ ದೊಂದಿಗೆ ಬರಲಿದೆ.

ಮೇ.18ಕ್ಕೆ ಕೊರೊನಾ ತಡೆಗೆ ಹೊಸ‌ ನಿಯಮ‌ ಜಾರಿಯಾಗಲಿದೆ. 21 ನೇ ಶತಮಾನ‌ ಭಾರತದಾಗುವಂತೆ ಶ್ರಮಿಸೊಣ ಕೊರೊನಾ‌ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸುವ ಮೂಲಕ ಜಯಸಾಧಿಸುವ.‌ ಇಡಿ‌ ವಿಶ್ವವೇ ಒಂದು‌ ಪರಿವಾರ ಎಂಬುದಕ್ಕೆ ನಮ್ಮ ಭಾರತದ ಸಂಸ್ಕೃತಿಯೇ ತೋರಿಸಿಕೊಟ್ಟಿದೆ. ಕೊರೊನಾ ಜನಜೀವನದಿಂದ ದೂರ ಆಗಲ್ಲ ಅದರ ಜೊತೆಗೆ ನಾವೆಲ್ಲ ಬದುಕಬೇಕಿದೆ ಎಂದು ತಜ್ಞರು ಹೇಳಿದ್ದಾರೆ.

ಸದ್ಯಕ್ಕೆ ಕೊರೊನಾ‌ ದೂರಾಗುವ ಲಕ್ಷಣ ಕಾಣುತ್ತಿಲ್ಲ. ಹಾಗಂತ ಆತಂಕ ಬೇಡ. ಸ್ವಚ್ಛತೆ, ಹೊಸ‌ನಿಯಮ ಹೊಅಸ ಆಯಾಮದ‌ ಮೂಲಕ ಜೀವನ‌ ನಡೆಸಬೇಕು ಎಂದರು.

ರೈತರು, ಕಾರ್ಮಿಕರು ಸಣ್ಣ ‌ಉದ್ಯಮಿದಾರರಿಗೆ ಭಾರತ ಉದ್ಯೋಗದಾತರಿಗೆ ಅನುಕೂಲ ಕಲ್ಪಿಸುವ ಹಿನ್ನಲೆ 20 ಲಕ್ಷ‌ ಕೋಟಿ ಆರ್ಥಿಕ‌ ಪ್ಯಾಕೇಜ್ ಆತ್ಮ‌ ನಿರ್ಭರ ಭಾರತ ಅಭಿಯಾನ‌ ಎಂಬ ಹೆಸರಿನಲ್ಲಿ ಕೆಲಸ‌ ಮಾಡಲಿದೆ ಎಂದು ತಿಳಿಸಿದರು.
ಇದು ದೇಶದ ಜಿಡಿಪಿಯ 10 ಪ್ರತಿಶತದಷ್ಟಿದೆ ಎಂದು ಮೋದಿಯವರು ತಿಳಿಸಿದರು.

ಲೋಕಲ್ ಸೇ‌ ಗ್ಲೋಬಲ್‌‌ ಆಗಬೇಕಿದೆ. ಲೋಕಲ್‌ ಕಿಲಿಯೇ ವೋಕಲ್‌ ಆಗಬೇಕಿದೆ. ಆರ್ಥಿಕತೆ‌ ಮೂಲ‌ಸೌಕರ್ಯಕ್ಕೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಮಾಡಲಾಗುತ್ತಿದೆ.‌ ಭಾರತೀಯರು ಲೋಕಲ್ ವ್ಯವಸ್ಥೆ ಯನ್ನು ಉತ್ತಮ ಸೌಕರ್ಯದಿಂದ ಅದಕ್ಕೆ ಪ್ರಚಾರ ನೀಡಿ ಗ್ಲೊಬಲ್‌ ಆಗಿಸಬೇಕಿದೆ.

ಆ ಹಿ‌ನ್ನೆಲೆ ಗುಡಿ ಕೈಗಾರಿಕೆ, ಸ್ವದೇಶಿ‌ ಉದ್ಯೊಗ ,‌ಗೃಹ ಉದ್ಯೋಗ ನಿರ್ಮಾಣಕ್ಕೆ‌ ಹೆಚ್ಚಿನ ಒತ್ತು‌ ನೀಡಬೇಕೆಂದು ಅವರು‌ ಕರೆ‌ ನೀಡಿದರು.

Related Articles

Leave a Reply

Your email address will not be published. Required fields are marked *

Back to top button