ಭೂಸ್ವರ್ಗಕ್ಕೆ ಬರಲು ಸಿನಿಮಾ ಮಂದಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ
ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವಾದ 370 , 35ಎ ವಿಧಿ ರದ್ದು ಪಡಿಸಿದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅವರ ಭಾಷಣದ ಮುಖ್ಯಾಂಶಗಳು ಇಲ್ಲಿವೆ…
ಕೆಲವು ವರ್ಷಗಳವರೆಗೆ ಮಾತ್ರ ಜಮ್ಮು ಕಾಶ್ಮೀರದಲ್ಲಿ ಕೇಂದ್ರಾಡಳಿತ ಇರಲಿದೆ. ಜಮ್ಮು ಕಾಶ್ಮೀರದ ಜನರಿಂದಲೇ ವಿಧಾನಸಭೆ, ಲೋಕಸಭೆ ಕ್ಷೇತ್ರದ ಆಯ್ಕೆ ನಡೆಯಲಿದ್ದು ಪ್ರಜಾಪ್ರಭುತ್ವ ಬಲಗೊಳಿಸಲಿದ್ದೇವೆ. ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಜಮ್ಮು ಕಾಶ್ಮೀರದ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲಾಗುವುದು. ಜಮ್ಮು ಕಾಶ್ಮೀರಕ್ಕೆ ಶೀಘ್ರಗತಿಯಲ್ಲಿ ಮೂಲ ಸೌರ್ಕರ್ಯಗಳನ್ನು ಕಲ್ಪಿಸಲಾಗುವುದು. ಎಲ್ಲವನ್ನೂ ಯೋಚಿಸಿಯೇ ನಾವು ತೀರ್ಮಾನ ಕೈಗೊಂಡಿದ್ದೇವೆ. ಜಮ್ಮು ಕಾಶ್ಮೀರದಲ್ಲಿ ಮಹಿಳೆಯರು, ಯುವಕರು ಅಧಿಕಾರ ಹಿಡಿಯಲಿದ್ದಾರೆ.
ಜಮ್ಮು ಕಾಶ್ಮೀರ ಬೃಹತ್ ಪ್ರವಾಸಿ ಕೇಂದ್ರ ಆಗಲಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ದೇಶ ವಿದೇಶದ ಸಿನೆಮಾ ಇಂಡಸ್ಟ್ರಿ ಕಾಶ್ಮೀರದತ್ತ ಚಿತ್ತ ಹರಿಸಲಿದೆ. ಬಾಲಿವುಡ್, ಹಾಲಿವುಡ್ , ಟಾಲಿವುಡ್ ಗೆ ಶೂಟಿಂಗ್ ಗಾಗಿ ಭೂಲೋಕದ ಸ್ವರ್ಗಕ್ಕೆ ಬರುವಂತೆ ನಾನು ಆಹ್ವಾನಿಸುತ್ತೇನೆ. ಅಂತೆಯೇ ಕ್ರೀಡಾ ಕ್ಷೇತ್ರದಲ್ಲೂ ಕಾಶ್ಮೀರದ ಯುವ ಸಮೂಹ ವಿಶ್ವದಲ್ಲಿ ಗಮನ ಸೆಳೆಯಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.




