ಪ್ರಮುಖ ಸುದ್ದಿ
ಕೊರೊನಾ ರೋಗಿಯಿಂದ ಸರ್ಕಾರ 3 ಲಕ್ಷ ಪಡೆಯುತ್ತಿದೆ ಎಂಬುದು ಶುದ್ಧ ಸುಳ್ಳು- ರೇಣುಕಾಚಾರ್ಯ
ಕೊರೊನಾ ರೋಗಿಯಿಂದ ಸರ್ಕಾರ 3 ಲಕ್ಷ ಪಡೆಯುತ್ತಿದೆ ಎಂಬುದು ಶುದ್ಧ ಸುಳ್ಳು- ರೇಣುಕಾಚಾರ್ಯ
ದಾವಣಗೆರೆಃ ಒಬ್ಬ ಕೊರೊನಾ ರೋಗಿಯಿಂದ ಸರ್ಕಾರ 3 ಲಕ್ಷ ಪಡೆಯುತ್ತಿದೆ ಎಂಬುದು ಶುದ್ಧ ಸುಳ್ಳು ನಾನು ಅನ್ನ ಮುಟ್ಟಿ ಹೇಳುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಹೊನ್ನಾಳಿ ಪಟ್ಟಣದ ಕೋವಿಡ್ ಕೇರ್ ಸೆಂಟರ್ ಗೆ ದಿಢೀರ್ ಭೇಟಿ ನೀಡಿದ ಅವರು, ಸೋಂಕಿತರ ಆರೋಗ್ಯ ವಿಚಾರಿಸಿ ಕೊರೊನಾ ಸೋಂಕಿತರ ಆರೋಗ್ಯ ಮುಖ್ಯ ನಿಮ್ಮ ಯೋಗಕ್ಷೇಮಕ್ಕಿಂತ ಬೇರೆನೂ ಮುಖ್ಯವಲ್ಲ. ನೀಮಗೇನಾದರೂ ತೊಂದರೆಯಾಗಿ ಪ್ರಾಣಹಾನಿಯಾದಲ್ಲಿ ನಾನು ಪ್ರಾಣ ಕೊಡಲು ಸಿದ್ಧ ಎಂದು ಸೋಂಕಿತರಿಗೆ ಧೈರ್ಯ ತುಂಬಿದರು.
ಏನೇ ಸಮಸ್ಯೆ ಇದ್ದರೂ ಹೇಳಿ. ಸರಿಪಡಿಸುವೆ. ವಾರಕ್ಕೊಮ್ಮೆ ಈ ಕೋವಿಡ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲಿಸುವೆ ಎಂದು ಭರವಸೆ ನೀಡಿದರು. ಸರ್ಕಾರ ಓರ್ವ ರೋಗಿಯಿಂದ ಮುರು ಲಕ್ಷ ತೆಗೆದುಕೊಳ್ಳುತ್ತಿದೆ ಎಂಬುದು ಶುದ್ಧ ಸುಳ್ಳು ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು.