ಪ್ರಮುಖ ಸುದ್ದಿ
ಖಡಕ್ ಆಫೀಸರೆಂಬ ಸೋಗು ಬಿಡಿ : ಎಸ್ಪಿ ರವಿ ಚನ್ನಣ್ಣನವರ್ ವಿರುದ್ಧ ‘ಪ್ರತಾಪ’
ಮೈಸೂರು: ಹುಣಸೂರು ಪಟ್ಟಣದಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ನಿಷೇಧಾಜ್ಞೆ ಉಲ್ಲಂಘನೆ ಹಾಗೂ ನಿಯಮ ಮೀರಿ ಕಾರ್ ಚಾಲನೆ ಆರೋಪದ ಮೇಲೆ ನಿನ್ನೆ ಸಂಸದ ಪ್ರತಾಪ ಸಿಂಹ ಬಂಧನಕ್ಕೊಳಗಾಗಿದ್ದರು. ಸ್ಟೇಷನ್ ಬೇಲ್ ಮೂಲಕ ಬಿಡುಗಡೆ ಆಗಿರುವ ಪ್ರತಾಪ ಸಿಂಹ ಮೈಸೂರು ಎಸ್ಪಿ ರವಿ ಚನ್ನಣ್ಣನವರ್ ವಿರುದ್ಧ ಮತ್ತೆ ಕಿಡಿ ಕಾರಿದ್ದಾರೆ.
ಆಳುವವರ ಅಣತಿ ಮೀರುವ ಹಾಗಿಲ್ಲ ಅಲ್ವಾ ಸಾರ್?ಕೊನೆಪಕ್ಷ ಖಡಕ್ ಅಧಿಕಾರಿಗಳೆಂಬ ಸೋಗು ಕಳಚಿಟ್ಟು ಆಳುವ ಪಕ್ಷದ ಆಳುಗಳು ಅನ್ನುವುದನ್ನು ಒಪ್ಪಿಕೊಳ್ಳಿರಿ ಎಂದು ಸಂಸದ ಪ್ರತಾಪ ಸಿಂಹ ಟ್ವೀಟ್ ಮಾಡಿದ್ದಾರೆ. ದತ್ತ ಜಯಂತಿಗೆ ಸೂಕ್ತ ವ್ಯವಸ್ಥೆ ಮಾಡಿದ ಅಲ್ಲಿನ ಎಸ್.ಪಿ ಅಣ್ಣಾಮಲೈ, ರಾಜ್ಯ ಸರ್ಕಾರಕ್ಕೆ ಎದುರು ಹಾಕಿಕೊಂಡ ಡಿಐಜಿ ರೂಪ, ಮೆಡಿಕಲ್ ಸೀಟ್ ಬ್ಲಾಕಿಂಗ್ ಹಗರಣ ತಡೆದ ಐಎಎಸ್ ರಶ್ಮಿ ಅವರನ್ನು ನೋಡಿ ಕಲಿಯಿರಿ, ಸಾಕಿನ್ನು ಭಾಷಣ ನಿಲ್ಲಿಸಿ ಎಂದು ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.