ಪ್ರಮುಖ ಸುದ್ದಿ

ತಮ್ಮನಿಂದಲೇ ಅಣ್ಣನ ಹತ್ಯೆ!

ದಾವಣಗೆರೆ: ತಾಯಿ ಜತೆ ಗಲಾಟೆ ಮಾಡುತ್ತಿದ್ದುದನ್ನು  ಪ್ರಶ್ನಿಸಿದ ಅಣ್ಣನನ್ನು ತಮ್ಮನೇ ಹತ್ಯೆ ಮಾಡಿದ ಘಟನೆ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿ‌ ನಡೆದಿದೆ. ಮಹಾಂತೇಶ ತಾಯಿ ಜತೆ ಗಲಾಟೆ ಮಾಡುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಜಯರಾಮ್‌ ಪ್ರಶ್ನಿಸಿ ಗಲಾಟೆ ಬಿಡಿಸಲು ಹೋಗಿದ್ದಾರೆ. ಆದರೆ, ಮಹಾಂತೇಶ ಅಣ್ಣನೊಂದಿಗೂ ವಾಗ್ವಾದಕ್ಕಿಳಿದು  ಮಾರಕಾಸ್ತ್ರದಿಂದ ಹಲ್ಲೆ‌ ನಡೆಸಿದ್ದಾನೆ. ಪರಿಣಾಮ ದಾವಣಗೆರೆ ಆಸ್ಪತ್ರೆಗೆ ದಾಖಲಾದ ಗಾಯಾಳು ಜಯರಾಮ್ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಆರೋಪಿ ಮಹಾಂತೇಶನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಈ ಬಗ್ಗೆ ಸಂತೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related Articles

Leave a Reply

Your email address will not be published. Required fields are marked *

Back to top button