ಮೈಸೂರ ಸ್ಯಾಂಡಲ್ ಸೋಪಿಗೆ ರಾಯಭಾರಿಯೇ ಬೇಕಿಲ್ಲ – ದೇವು ಭೀ.ಗುಡಿ
ಸ್ಯಾಂಡಲ್ ಸೋಪೆ ಬ್ರ್ಯಾಂಡೆಡ್ ಇದಕ್ಯಾವ ರಾಯಭಾರಿ ಅಗತ್ಯವಿಲ್ಲ - ಕನ್ನಡ ಸೇನೆ ಕಿಡಿ

ಮೈಸೂರ ಸ್ಯಾಂಡಲ್ ಸೋಪಿಗೆ ರಾಯಭಾರಿಯೇ ಬೇಕಿಲ್ಲ – ದೇವು ಭೀ.ಗುಡಿ
ಸ್ಯಾಂಡಲ್ ಸೋಪೆ ಬ್ರ್ಯಾಂಡೆಡ್ ಇದಕ್ಯಾವ ರಾಯಭಾರಿ ಅಗತ್ಯವಿಲ್ಲ – ಕನ್ನಡ ಸೇನೆ
ವಿವಿ ಡೆಸ್ಕ್ಃ ಕರ್ನಾಟಕದ ಮೈಸೂರು ಸ್ಯಾಂಡಲ್ ಸೋಪ್ ಗೆ ಪರಭಾಷೆ ನಟಿ ತಮ್ಮನ್ನ ಭಾಟಿಯಾ ಅವರನ್ನು ನೇಮಿಸಿರುವದು ಖಂಡನೀಯವಾಗಿದೆ ಎಂದು ಕರ್ನಾಟಕ ಕನ್ನಡ ಸೇನೆಯ ಕಲ್ಯಾಣ ಕರ್ನಾಟಕ ವಿಭಾಗೀಯ ಸಂಚಾಲಕ ದೇವು ಭೀ.ಗುಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮೈಸೂರ ಸ್ಯಾಂಡಲ್ ಸೋಪು ಇಂಟರ್ ನ್ಯಾಷನಲ್ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿದೆ ಅಷ್ಟರ ಮಟ್ಟಿಗೆ ಆ ಸೋಪು ಬಳಕೆಯಾಗುತ್ತಿದೆ ಅಲ್ಲದೆ ಗಂಧದ ನಾಡಿನ ಶ್ರೀಗಂಧ ಸೋಪು ಎಂಬುದು ಬ್ರ್ಯಾಂಡ್ ಆಗಿದೆ.
ಹೀಗಾಗಿ ಇದಕ್ಯಾವ ರಾಯಭಾರಿ ಬೇಕಾಗಿಲ್ಲ. ಸುಖಾಸುಮ್ಮನೆ 2 ವರ್ಷಕ್ಕೆ 6 ಕೋಟಿ ರೂಪಾಯಿ ಕೊಟ್ಟು ರಾಯಭಾರಿಯನ್ನಾಗಿ ಪರಭಾಷೆ ನಟಿಯನ್ನು ಆಯ್ಕೆ ಮಾಡಿರುವದ ಖೇದಕರ ಎಂದ ಅವರು, ಸರ್ಕಾರ ಕೂಡಲೇ ರಾಯಭಾರಿ ನೇಮಕ ರದ್ದುಗೊಳಿಸಬೇಕು. ಮೊದಲನೆಯದಾಗಿ ರಾಯಭಾರಿ ಅಗತ್ಯವಿಲ್ಲ. ಒಂದು ವೇಳೆ ರಾಯಭಾರಿ ಕೊಡಲೇ ಬೇಕು ಎಂದಾದರೆ ಕನ್ನಡ ನಟಿಯರಿಗೆ ಆದ್ಯತೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.