ಪ್ರಮುಖ ಸುದ್ದಿ

ರಾಷ್ಟ್ರಗೀತೆ ಗಾಯನ: ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದು ಹೀಗೆ…

ಮಂಗಳೂರು: ರಾಷ್ಟ್ರಗೀತೆ ಹಾಡದವರು ದೇಶದ್ರೋಹಿಗಳು ಹಾಡುವವರು ದೇಶಭಕ್ತರು ಎಂಬಂತೆ ಬಿಂಬಿಸಲಾಗುತ್ತಿದೆ. ರಾಷ್ಟ್ರಗೀತೆ ಹಾಡಿಯೇ ತಾನೊಬ್ಬ ರಾಷ್ಟ್ರಪ್ರೇಮಿ ಎಂಬುದನ್ನು ಸಾಬೀತುಪಡಿಸಬೇಕು ಅನ್ನುವುದು ಮೂರ್ಖತನ ಆಗುತ್ತದೆ ಎಂದು ಸಾಹಿತಿ ಡಾ.ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಆಳ್ವಾಸ್ ನುಡಿಸಿರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ರಾಷ್ಟ್ರಗೀತೆ ಹಾಡುವುದರ ಬಗ್ಗೆಯೂ ಚರ್ಚೆ ಶುರುವಾಗಿದೆ. ದೇಶಭಕ್ತಿ ಎಂಬುದು ಒತ್ತಾಯದಿಂದ ಹುಟ್ಟುವಂತದಲ್ಲ. ಸಮಯ, ಸಂದರ್ಭ ಬಂದಾಗ ನಾವೆಲ್ಲಾ ರಾಷ್ಟ್ರ ಗೀತೆ ನಾಡಗೀತೆ ರೈತಗೀತೆ ಹಾಡಬೇಕು ಎಂದಿದ್ದಾರೆ.

ಜ್ಯಾತ್ಯಾತೀತ ನಿಲುವಿನಲ್ಲಿ ನಂಬಿಕೆ ಉಳ್ಳವರು ಎಲ್ಲರೂ ಇಂದು ಒಂದಾಗಬೇಕಿದೆ. ಇದು ಸಾಧ್ಯವಾಗದೇ‌ ಹೋದಲ್ಲಿ ದೇಶ ಒಡೆದು ಹೋಗಲಿದೆ. ಬಹುತ್ವವನ್ನು ನಾಶ ಮಾಡಿದರೆ ಸಮಾಜ ಅವನತಿಯತ್ತ ಸಾಗುತ್ತದೆ. ಏಕತ್ವ ಚಿಂತನೆ ಸಮಾಜಕ್ಕೆ‌ ಅಪಾಯಕಾರಿ. ಬಹುತ್ವ ವಿರೋಧಿಸುವ ಕೋಮುವಾದ ಯಾವ ಧರ್ಮದಲ್ಲಿ ಇದ್ದರೂ ಸಹಿಸಲು ಅಸಾಧ್ಯ ಎಂದು ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button