ಪ್ರಮುಖ ಸುದ್ದಿ
3+14 ಅತೃಪ್ತ ಶಾಸಕರು ಅನರ್ಹ – ಸ್ಪೀಕರ್ ರಮೇಶ ಕುಮಾರ್
ಅತೃಪ್ತ ಕಾಂಗ್ರೆಸ್ ಶಾಸಕರಾದ ಭೈರತಿ ಬಸವರಾಜ್, ಮುನಿರತ್ನ, ಎಸ್.ಟಿ. ಸೋಮಶೇಖರ್, ಪ್ರತಾಪಗೌಡ, ರೋಷನ್ ಬೇಗ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಸುಧಾಕರ್, ಎಮ್.ಟಿ.ಬಿ ನಾಗರಾಜ್ , ಶ್ರೀಮಂತ ಪಾಟೀಲ್, ಆನಂದ ಸಿಂಗ್ ಹಾಗೂ ಜೆಡಿಎಸ್ ನ ಅತೃಪ್ತ ಶಾಸಕರಾದ ಹೆಚ್.ವಿಶ್ವನಾಥ, ನಾರಾಯಣಗೌಡ, ಗೋಪಾಲಯ್ಯ ಸೇರಿ ಒಟ್ಟು 14 ಶಾಸಕರುಗಳನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವುದಾಗಿ ಸ್ಪೀಕರ್ ರಮೇಶ ಕುಮಾರ್ ಮಾಧ್ಯಮಗೋಷ್ಠಿ ಮೂಲಕ ತಿಳಿಸಿದ್ದಾರೆ.
ಈ ಹಿಂದೆ ರಮೇಶ ಜಾರಕಿಹೊಳಿ, ಮಹೇಶ ಕುಮಟಹಳ್ಳಿ ಹಾಗೂ ಆರ್ .ಶಂಕರ್ ಅವರನ್ನು ಅನರ್ಹಗೊಳಿಸಲಾಗಿತ್ತು. ಈವರೆಗೆ (3+14=17 ) ಒಟ್ಟು 17ಅತೃಪ್ತ ಶಾಸಕರನ್ನು ಸ್ಪೀಕರ್ ರಮೇಶಕುಮಾರ್ ಅನರ್ಹಗೊಳಿಸಿದ್ದಾರೆ. ಪರಿಣಾಮ 224 ವಿಧಾನಸಭೆಯ ಸಂಖ್ಯಾ ಬಲ ಈಗ 224 ರಿಂದ 207ಕ್ಕೆ ಇಳಿದಿದೆ.