ಪ್ರಮುಖ ಸುದ್ದಿ
ಪಾಗಲ್ ಪ್ರೇಮಿ : ಸದ್ಯ ಮದ್ವೆಬೇಡ ಅಂದ ಪ್ರೇಯಸಿಯ ಹತ್ಯೆ ಯತ್ನ
ತುಮಕೂರು: ಸದ್ಯ ಮದುವೆ ಬೇಡ ಎಂದಿರುವ ಪ್ರೇಯಸಿಗೆ ವೇಲ್ ನಿಂದ ಕತ್ತು ಬಿಗಿದು ಹತ್ಯೆಗೆ ಯತ್ನಿಸಿದ ಘಟನೆ ಶಿರಾ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯುವತಿ ಉಸಿರುಗಟ್ಟಿ ಗ್ನಾನ ತಪ್ಪಿದಾಗ ಪ್ರೇಮಿ ಮಹಾವೀರ ಎಲ್ಲಿಂದ ಎಸ್ಕೇಪ್ ಆಗಿದ್ದಾನೆ. ಕೆಲಹೊತ್ತಿನ ಬಳಿಕ ಎಚ್ಚರವಾದ ಯುವತಿ ಕುಟುಂಬದವರಿಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಶಿರಾ ಠಾಣೆಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು ಆರೋಪಿಗಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.