ಪ್ರಮುಖ ಸುದ್ದಿ
ಯತ್ನಾಳ ಹೇಳಿಕೆ ವಿಚಾರ ಬಿಜೆಪಿ ವರಿಷ್ಠರಿಗೆ ಪೇಜಾವರ ಶ್ರೀ ಸೂಚನೆ ಏನು.?
ಬಾಗಲಕೋಟ್ಃ ನೆರೆ ಹಾವಳಿಗೆ ಸಂಬಂಧಿಸಿದಂತೆ ಜನರ ಸಂಕಷ್ಟ ನೋಡಲು ಆಗದ ಕಾರಣ ಬಿಜೆಪಿ ಶಾಸಕ ಬಸನಗೌಡ ಯತ್ನಾಳ ಶೀಘ್ರ ಪರಿಹಾರ ವಿತರಣೆಗೆ ಹೇಳಿಕೆ ನೀಡಿದ್ದಾರೆ. ಈ ಕುರಿತು ಯತ್ನಾಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಬಿಜೆಪಿ ವರಿಷ್ಠರಿಗೆ ಸೂಚನೆ ನೀಡುವೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ನೆರೆಗೆ ಜನ ತತ್ತರಿಸಿದ್ದು, ಕೂಡಲೇ ಅವರಿಗೆ ಪರಿಹಾರ ದೊರೆತಲ್ಲಿ ಅನುಕೂಲವಾಗಲಿದೆ ಎಂಬ ಹಿನ್ನೆಲೆಯಲ್ಲಿ ಅವರು ಹೇಳಿಕೆ ನೀಡಿದ್ದಾರೆ ಎಂದು ಶ್ರೀಗಳು ಸಮರ್ಥನೆ ನೀಡುವ ಮೂಲಕ ಯತ್ನಾಲ ಬ್ಯಾಟಿಂಗ ಮಾಡಿದರು.