ಪ್ರಮುಖ ಸುದ್ದಿ

ಭಾರಿ ಮಳೆ ಸಿಎಂ‌ ಗ್ರಾಮ‌ ವಾಸ್ತವ್ಯ ಮುಂದೂಡಿಕೆ-ಖರ್ಗೆ

ಭಾರೀ ಮಳೆ‌ ಗ್ರಾಮ ವಾಸ್ತವ್ಯ ಮುಂದೂಡಿಕೆ

ಕಲಬುರಗಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದಿನಾಂಕ  22 ರಂದು  ತಾಲೂಕಿನ ಹೇರೂರ್ ( ಬಿ) ಗ್ರಾಮದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಸನ್ಮಾನ್ಯ ಮುಖ್ಯಮಂತ್ರಿಗಳ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಸನ್ಮಾನ್ಯ ಸಮಾಜಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ‌ ಶ್ರೀ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ‌.

ಮಳೆಯಿಂದಾಗಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕಾಗಿ ಸಿದ್ಧಗೊಳಿಸಿದ್ಧ ಟೆಂಟ್, ವೇದಿಕೆ ಮಳೆ ಗಾಳಿಯಿಂದಾಗಿ ಅಸ್ತವ್ಯಸ್ತಗೊಂಡಿದೆ ಎನ್ನಲಾಗಿದೆ. ಕಾರ್ಯಕ್ರಮ ಹಮ್ಮಿಕೊಂಡಿದ್ದ ಗ್ರಾಮದಲ್ಲಿ‌ ಭಾರಿ ಮಳೆಯಿಂದಾಗಿ ನೀರು‌ ನಿಂತು ಕೆಸರುಗದ್ದೆಯಂತಾಗಿದೆ ಎನ್ನಲಾಗಿದೆ.

ಕಾರಣ ಮುಂದಿನ ಜನತಾ ದರ್ಶನ ಹಾಗೂ ಗ್ರಾಮ‌ವಾಸ್ತವ್ಯದ‌ ದಿನಾಂಕವನ್ನು ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು  ಹೇಳಿದ್ದಾರೆ.

ಈ ಕುರಿತು ಜೂನ್ ೨೨ ರ ( ಶನಿವಾರ‌) ಬೆಳಿಗ್ಗೆ ೯ ಗಂಟೆಗೆ ಕಲಬುರಗಿ ನಗರದ ಐವಾನ್‌ ಇ ಶಾಹಿ ಅತಿಥಿ ಗೃಹದಲ್ಲಿ ಸನ್ಮಾನ್ಯ ಸಚಿವರು ಪತ್ರಿಕಾಗೋಷ್ಟಿ‌ ನಡೆಸಲಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button