ಪ್ರಮುಖ ಸುದ್ದಿ

ಯಾದಗಿರಿಗೆ ನಾಳೆ ಸಚಿವ ಪ್ರಭು ಚವ್ಹಾಣ, ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ

ನಾಳೆ ಸಚಿವ ಪ್ರಭು ಚವ್ಹಾಣ ಆಗಮನ, ಪ್ರವಾಹ ಪರಿಸ್ಥಿತ ಅವಲೋಕನ

ಯಾದಗಿರಿಃ ಪಶು ಸಂಗೋಪನೆ, ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ನಾಳೆ ಅಂದರೆ ಆಗಸ್ಟ್‌ 12 ಬುಧವಾರ ಜಿಲ್ಲೆಗೆ ಆಗಮಿಸಲಿದ್ದು, ಪ್ರವಾಹ ಪರಿಸ್ಥಿತಿ ಅವಲೋಕನೆ ನಡೆಸಲಿದ್ದಾರೆ.

ಮುಂಚಿತವಾಗಿ ಅಂದು ಜಿಲ್ಲೆಯ ಶಹಾಪುರ ತಾಲೂಕಿನ ಪ್ರವಾಹಕ್ಕೊಳಪಟ್ಟ ಹಲವು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಅಲ್ಲದೆ ತಾಲೂಕಿನ ಕೊಳ್ಳೂರ(ಎಂ) ಸೇರುವೆಗೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬುಧವಾರ ಬೆಳಗ್ಗೆ ಸಚಿವರು 11 ಗೆ ಶಹಾಪುರ ತಾಲೂಕಿನ‌ ಕೊಳ್ಳೂರ(ಎಂ) ಸೇತುವೆಗೆ ಸುತ್ತಲಿನ ಗ್ರಾಮಗಳಿಗೆ ಭೇಟಿ‌ ನೀಡಲಿದ್ದಾರೆ. ಮತ್ತು ಅಂದು ಪತ್ತಕರ್ತರನ್ನು ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದ್ದು,‌ ನಗರದ ಹಳೆ ಪ್ರವಾಸಿ ಮಂದಿರ ಹತ್ತಿರ ಬೆಳಗ್ಗೆ 9-40 ಗಂಟೆಗೆ ಹಾಜರಿರಬೇಕು ಎಂದು ಇಲಾಖೆ ಅಧಿಕಾರಿ ತಿಳಿಸಿದ್ದರೆ.

ಅಲ್ಲದೆ ಸಚಿವರು ಮದ್ಯಾಹ್ನ 3 ಗಂಟೇಗೆ ವಾಪಸ್ ಯಾದಗಿರಿಗೆ ಬಂದು ಜಿಲ್ಲಾಡಳಿತ ಭವನದಲ್ಲಿ ಪ್ರವಾಹ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ವಾರ್ತಾ ಇಲಾಖೆ ಮಾಹಿತಿ ನೀಡಿದೆ.

Related Articles

Leave a Reply

Your email address will not be published. Required fields are marked *

Back to top button