ಪ್ರಮುಖ ಸುದ್ದಿ

ಗರ್ಭೀಣಿ ಸ್ತ್ರೀಗೆ ದೊರೆಯದ ಚಿಕಿತ್ಸೆ ಪರದಾಡಿದ ಪೋಷಕರು, ಆಟೋದಲ್ಲಿಯೇ ಮಗುವಿಗೆ ಜನ್ಮವಿತ್ತ ತಾಯಿ

ಗರ್ಭಿಣಿ ಸ್ತ್ರೀಗೆ ದೊರೆಯದ ಚಿಕಿತ್ಸೆ ಪರದಾಡಿದ ಪೋಷಕರು, ಆಟೋದಲ್ಲೆ ಮಗುವಿಗೆ ಜನ್ಮ

ಯಾದಗಿರಿಃ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇಲ್ಲದ ಕಾರಣ, ಚಿಕಿತ್ಸೆಗಾಗಿ ಕೇಂದ್ರಕ್ಕೆ ಆಗಮಿಸಿದ‌ ಗರ್ಭೀಣಿ ಸ್ತ್ರೀಯೋರ್ವಳಿಗೆ ಚಿಕಿತ್ಸೆ ದೊರೆಯದೆ ಆಟೋದಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನರ
ಜಿಲ್ಲೆಯ ಸುರಪುರ ತಾಲೂಕಿನ ಶ್ರೀನಿವಾಸಪುರ ಗ್ರಾಮದಲ್ಲಿ ನಡೆದಿದೆ.

ಕಳೆದ ಕೆಲ ದಿನಗಳಿಂದ ಶ್ರೀನಿವಾಸಪೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲ ಸಿಬ್ಬಂದಿಗಳು ಇಲ್ಲದೇ ಆಸ್ಪತ್ರೆಗೆ ಬೀಗ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

ಸಮೀಪದ ಬಲಶೆಟ್ಟಿಹಾಳ ಗ್ರಾಮದ ಗರ್ಭಿಣಿ ನಿಂಗಮ್ಮಳೇ ಮಗುವಿಗೆ ಜನ್ಮ‌ ನೀಡಿದ ತಾಯಿ. ಮಗು ಮತ್ತು ತಾಯಿಯನ್ನು ಸದ್ಯ ರಾಜನಕೋಳೂರ ಆಸ್ಪತ್ರೆ ದಾಖಲಿಸಲಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.

ಶ್ರೀನಿವಾಸಪುರ ಆಸ್ಪತ್ರೆಯಲ್ಲಿ ಯಾರೊಬ್ಬರು ಸಿಬ್ಬಂದಿ, ವೈದ್ಯರಿಲ್ಲದೆ ಬಿಕೋ ಎನ್ನುತ್ತಿದೆ. ಪ್ರಥಮ‌ ಹಂತದ ಚಿಕಿತ್ಸೆ ನೀಡಲು ಕೇಂದ್ರದಲ್ಲಿ ಯಾರು ಇಲ್ಲವೆಂದು ಪೋಷಕರು ದೂರಿದ್ದಾರೆ.

ಖಡಕ್ ವಾರ್ನಿಂಗ್ ನೀಡಿದ್ದ ಸಚಿವರೇ ಮೊದಲು ಜಿಲ್ಲಾ ಆರೋಗ್ಯ ಇಲಾಖೆಗೆ ಹಿಡಿದ ಗ್ರಹಣ‌ ಬಿಡಿಸಿ

ಕರ್ತವ್ಯ ನಿರ್ವಹಿಸದ ಅಧಿಕಾರಿ ವರ್ಗ -‌ ಜನತೆಯ ಆಕ್ರೋಶ

ಶನಿವಾರ ಯಾದಗಿರಿಯಲ್ಲಿ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆದು ಕಾರ್ಯಸ್ಥಾನ‌ ಬಿಟ್ಟು ಕದಲಬಾರದೆಂದು ಎಚ್ಚರಿಕೆ ನೀಇಡದ್ದರು.
ಆದರೆ‌ ಮಾರನೇಯ ದಿನವೇ ಓರ್ವ ಗರ್ಭೀಣಿ ಮಹಿಳೆಗೆ ಸೂಕ್ತ ಚಿಕಿತ್ಸೆ ದೊರೆಯದ ಪರದಾಡಿದ ಘಟನೆ ನಡೆದಿದೆ.

ಜಿಲ್ಲಾ ಆರೋಗ್ಯ ಅಧಿಕಾರಿಗಳು ಏನ್ಮಾಡ್ತಿದ್ದಾರೆ ಎಂಬ ಪ್ರಶ್ನೆಯೇ ಇಲ್ಲಿ ಉದ್ಭವಿಸಿದೆ.

ಇದರಂತೆ ಕಳೆದ ಹದಿನೈದು ದಿನಗಳ‌ ಹಿಂದೆ‌ ಶಹಾಪುರ ತಾಲೂಕಿನ ಚಾಮನಾಳ‌ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ‌ ಒಂದು ಘಟನೆ ನಡೆದಿತ್ತು.

ಯಾದಗಿರಿ ಜಿಲ್ಲಾ ಆರೋಗ್ಯ ಇಲಾಖೆಗೆ ಮೊದಲು ರೋಗ ಹರಡಿದಂತೆ ಕಾಣುತ್ತಿದೆ. ಹೀಗಾಗಿ ಸಚಿವ ಚವ್ಹಾಣ ಅವರು, ಕೂಡಲೇ ಜಿಲ್ಲಾ ಆರೋಗ್ಯ ಇಲಾಖೆಗೆ ಮೊದಲು ಸೂಕ್ತ ಚಿಕಿತ್ಸೆ ನೀಡಬೇಕಿದೆ.

ಬಡವರಿಗೆ ಅನುಕೂಲವಾಗಬೇಕಿದ್ದ ಗ್ರಾಮೀಣ ಭಾಗದ ಆರೋಗ್ಯ ಪ್ರಾಥಮಿಕ ಕೇಂದ್ರಗಳು ಇದ್ದು ಇಲ್ಲದಂತಾಗಿವೆ. ಈ ಕುರಿತು ಸಚಿವರು ಆರೋಗ್ಯ ಇಲಾಖೆಯ ಸಚಿವ ಶ್ರೀರಾಮುಲು ಅವರ ಗಮನ ಸೆಳೆಯುವ ಮೂಲಕ ಈಚೆಗೆ ಶ್ರೀರಾಮು ಅವರು ಆಸ್ಪತ್ರೆ ಗಳ ವಾಸ್ತವ್ಯ ಮಾಡುವ ಮೂಲಕ ಸುಧಾರಣೆಗೆ ಮುಂದಾಗುವ ಹೇಳಿಕೆ ನೀಡಿದ್ದರು.

ಬೆಂಗಳೂರಿನ ಸರ್ಕಾರಿ ಆಸ್ಪತ್ರೆ ಗಳಲ್ಲಿಂದ ಮೊದಲ ವಾಸ್ತವ್ಯ ಶುರು ಮಾಡಲಿದ್ದೇನೆ ಎಂದು ಹೇಳಿದ್ದರು. ಬೆಂಗಳೂರ ನಗರ ಬಿಟ್ಟು ರಾಜ್ಯದಲ್ಕಿಯೇ ತೀವ್ರ ಹದಗೆಟ್ಟ ಯಾದಗಿರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ‌ ಮೊದಲ ವಾಸ್ತವ್ಯ ಮಾಡುವಂತಾಗಲಿ‌ ಎಂದು ಈ ಭಾಗದ ನೊಂದ ನಾಗರಿಕರ ಆಶಯವಾಗಿದೆ.

ಜಿಲ್ಲಾ ಉಸ್ತುವಾರಿಗಳು ಇದಕ್ಕೆ ಸ್ಪಂಧಿಸುವ ಮೂಲಕ ಆರೋಗ್ಯ ಇಲಾಖೆ ಸುಧಾರಣೆಗೆ ಶ್ರೀರಾಮುಲು ಅವರು ಯಾದಗಿರಿ, ಶಹಾಪುರ‌ ಮತ್ತು ಸುರಪುರ ತಾಲೂಕು ಆಸ್ಪತ್ರೆಗಳಲ್ಲಿ ವಾಸ್ತವ್ಯ ಮಾಡುವ ಮೂಲಕ‌ ಹಿಂದುಳಿದ ಜಿಲ್ಲೆಯ ಅಭಿವೃದ್ಧಿಗೆ ಸ್ಪಂಧನೆ ನೀಡಲಿ.

Related Articles

Leave a Reply

Your email address will not be published. Required fields are marked *

Back to top button