ಕಾಂಗ್ರೆಸ್ ಪರ ಭರ್ಜರಿ ಬ್ಯಾಟ್ ಮಾಡಿದ ಬಹುಭಾಷಾ ನಟ ಪ್ರಕಾಶ್ ರೈ : ‘ಕೈ’ ಹಿಡಿದು ‘ರೈ’ ರಾಜಕೀಯ?
ಬೆಂಗಳೂರು: ತೊಡೆ ತಟ್ಟಿದರೆ ನಾನು ಸುಮ್ಮನೆ ಕೂಡೋಕೆ ಆಗೋದಿಲ್ಲ. ನಾನು ಹೇಡಿ ಅಲ್ಲ, ಅಂಥ ಸಂದರ್ಭ ಬಂದರೆ ರಾಜಕೀಯಕ್ಕೆ ಬರುವುದು ದೊಡ್ಡ ವಿಚಾರವೇನು ಅಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ. ಪ್ರೆಸ್ ಕ್ಲಬ್ ವತಿಯಿಂದ ನಗರದ ಪ್ರೆಸ್ ಕ್ಲಬ್ ನಲ್ಲಿ ವರ್ಷದ ವ್ಯಕ್ತಿ ಗೌರವ ಸ್ವೀಕರಿಸಿದ ಬಳಿಕ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ರಾಜಕೀಯ ರಂಗಪ್ರವೇಶದ ಇಂಗಿತವನ್ನು ವ್ಯಕ್ತಪಡಿಸಿದರು.
ಕಳೆದ ನಾಲ್ಕು ತಿಂಗಳ ಹಿಂದೆ ಬಿಜೆಪಿ ಅದ್ಯಕ್ಷ ಅಮಿತ್ ಶಾ ಬಂದು ಕರ್ನಾಟಕದಲ್ಲಿ ಬೆಂಕಿ ಇಟ್ಟಿದ್ದರು. ಬೆಂಕಿ ನಂದಿಸಲು ಕಾಂಗ್ರೆಸ್ ಸಾಕಷ್ಟು ಶ್ರಮವಹಿಸಿತು. ಈಗ ಮತ್ತೆ ಅಮಿತ್ ಶಾ ಬಂದಿದ್ದಾರೆ. ಹೆಣ ಬಿದ್ದರೆ ಸಾಕು ಬಿಜೆಪಿ ರಾಜಕೀಯ ಮಾಡಲು ಮುಂದಿರುತ್ತದೆ. ಶೋಭಾ ಕರಂದ್ಲಾಜೆ, ಜಗಧೀಶ ಶೆಟ್ಟರ್ ಗೆ ಬೇರೆ ಕೆಲಸವಿಲ್ಲ. ರಾಜ್ಯದಲ್ಲಿ ಬಿಜೆಪಿ ಬೇಳೆ ಬೇಯಿಸಿಕೊಳ್ಳಲು ಬಿಡಕೂಡದು ಎಂದು ಹೇಳುವ ಮೂಲಕ ಪ್ರಕಾಶ ರೈ ಕೈ ಪಕ್ಷದ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಆ ಮೂಲಕ ಮುಂಬರು ಚುನಾವಣೆ ವೇಳೆಗೆ ಬಹುಭಾಷಾ ನಟ ಕಾಂಗ್ರೆಸ್ ಪಕ್ಷದ ಕೈ ಹಿಡಿಯುವ ಸೂಚನೆ ಸಿಕ್ಕಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.