ಪ್ರಮುಖ ಸುದ್ದಿ

ಬಡ ಮಕ್ಕಳಿಗೆ ಪಿಎಸ್ಐ ನಿತ್ಯ 1 ತಾಸು ಪಾಠ

ಈ ಮಕ್ಕಳಿಗಾಗಿ ನಿತ್ಯ 1 ತಾಸು ಶಿಕ್ಷಕನಾಗುವ ಪಿಎಸ್ಐ
ಕುರುಗೋಡು: ಬೆಂಗಳೂರಿನ ವಲಸೆ ಕಾರ್ಮಿಕರ ಮಕ್ಕಳಿಗೆ ನಿತ್ಯವೂ ಒಂದು ಗಂಟೆ ಉಚಿತವಾಗಿ ಪಾಠ ಮಾಡುವ ಮೂಲಕ ನಿತ್ಯ ಒಂದು ತಾಸು ಶಿಕ್ಷಕನಾಗಿ ಬಡ ಮಕ್ಕಳಿಗೆ ಜ್ಞಾನಾರ್ಜನೆ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ವಿಷಯ ತಿಳಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪಿಎಸ್ಐ ಅವರಿಗೆ ಬೆನ್ನುತಟ್ಟಿದ್ದಾರೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಪೊಲೀಸ್ ಠಾಣೆಯ ಪಿಎಸ್ಐ ಶಾಂತಪ್ಪ ಜಡೆಮ್ಮನವರ್ ಅವರು ತಾಲ್ಲೂಕಿನ ಹೊಸಗೆಣಿಕೆಹಾಳು ಗ್ರಾಮದವರು. ಪೊಲೀಸ್ ಕರ್ತವ್ಯದ ಮಧ್ಯೆ ಬಿಡುವು ಮಾಡಿಕೊಂಡು ಕೊಳೆಗೇರಿ ಪ್ರದೇಶದಲ್ಲಿನ ವಲಸೆ ಕಾರ್ಮಿಕರ ಮಕ್ಕಳಿಗೆ ಗಣಿತ ಮತ್ತು ಸಾಮಾನ್ಯ ಜ್ಞಾನ ವಿಷಯ ಬೋಧಿಸುತ್ತಿದ್ದಾರೆ.

ಬಡತನದಲ್ಲಿ ಬೆಳೆದು ಪಿಎಸ್ಐ ಉದ್ಯೋಗದಲ್ಲಿರುವ ಶಾಂತಪ್ಪ ಜಡೆಮ್ಮನವರ್, ವಲಸೆ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ಬಾರದು ಎಂಬ ಕಾರಣಕ್ಕೆ ಬಿಡುವಿನ ವೇಳೆಯಲ್ಲಿ ಠಾಣೆ ವ್ಯಾಪ್ತಿಯ ನಾಗರಬಾವಿ, ವಿನಾಯಕ ನಗರ, ವರ್ತುಲ ರಸ್ತೆ ಸುತ್ತಮುತ್ತ ವಾಸವಿರುವ ಅವರ ಗುಡಿಸಲುಗಳ ಬಳಿ ತೆರಳಿ ಪ್ರತಿನಿತ್ಯ ಒಂದು ಗಂಟೆ ಪಾಠಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಪಿಎಸ್ಐಗೆ ಅವರ ಈ ಸೇವೆ ಕುರಿತು ಮಾಹಿತಿ ಪಡೆದ ಶಿಕ್ಷಣ ಸಚಿವ ಸುರೇಶಕುಮಾರ ೀಚೆಗೆ ಸ್ಥಳಕ್ಕೆ ಭೇಟಿ ಪಿಎಸ್ಐ ಅವರ ಈ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಅನೇಕ ಸಂಘ, ಸಂಸ್ಥೆಗಳು ಶಾಂತಪ್ಪ ಅವರ ಸೇವಾ ಕಾರ್ಯಕ್ಕೆ ಕೈಜೋಡಿಸಿ ಪುಸ್ತಕ, ಬ್ಯಾಗ್ಗಳನ್ನು ಮಕ್ಕಳಿಗೆ ಉಚಿತವಾಗಿ
ವಿತರಣೆ ಮಾಡಿವೆ. ಬಡ ಮಕ್ಕಳು ಕೊರೊನಾ ಮಹಾಮಾರಿ, ಲಾಕ್ ಡೌನ್ ಎಂದು ಶೈಕ್ಷಣಿಕವಾಗಿ ವಂಚಿತವಾದರೆ ಮುಂದೆ ಅವರ ಭವಿಷ್ಯ ಕಷ್ಟಕರ, ಹಿನ್ನೆಲೆ ಕೈಲಾದಷ್ಟು ಕರ್ತವ್ಯ ಮುಗಿಸಿದ ನಂತರ ಬಿಡುವು ಮಾಡಿಕೊಂಡು ಇಲ್ಲಿನ ಬಡ, ಕಾಮಿ೵ಕ ಮಕ್ಕಳಿಗೆ ಬೋಧನೆ ಮಾಡುತ್ತಿದ್ದೇನೆ ಎನ್ನುತ್ತಾರೆ ಪಿಎಸ್ಐ ಶಾಂತಪ್ಪ.

Related Articles

Leave a Reply

Your email address will not be published. Required fields are marked *

Back to top button