ಕ್ಯಾಂಪಸ್ ಕಲರವ

ವಿದ್ಯಾರ್ಥಿನಿಯರು ಕೀಳರಮೆ ತೊರೆದು ಮುನ್ನುಗ್ಗಿ-ಹಿರೇಮಠ

ಅತಿಥಿ ಉಪನ್ಯಾಸ, ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ

ಯಾದಗಿರಿ, ಶಹಾಪುರಃ ವಿದ್ಯಾರ್ಥಿನಿಯರು ಕಿಳರಿಮೆ ತೊರೆದು ಹೊರಬರಬೇಕು. ಐ.ಎ.ಎಸ್. ಹಾಗೂ ಕೆ.ಎ.ಎಸ್. ನಂತಹ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬೆಕೆಂಬ ಮಹತ್ವಕಾಂಕ್ಷೆಯೊಂದಿಗೆ ವಿಧ್ಯಾಭ್ಯಾಸ ಮಾಡಬೇಕು ಆಗ ಏನಾದರೂ ಸಾಧಿಸಲು ಸಾಧ್ಯವಿದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಪಂಪಾಪತಿ ಹಿರೇಮಠ ತಿಳಿಸಿದರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ ಹಾಗೂ ದಿಶಾ ಅವರ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿನಿಯರ ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿಪರ ಕೋರ್ಸುಗಳ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಸ್ಪಷ್ಟವಾದ ಗುರಿ ಹೊಂದಿರಬೇಕು. ಅದನ್ನು ತಲುಪಲು ಹಗಲಿರಳು ಶ್ರಮವಹಿಸೇಕು. ಏನೇ ಕಷ್ಟ ಬಂದರೂ ಅವುಗಳೆಲ್ಲವನ್ನು ಮೆಟ್ಟಿ ನಿಲ್ಲುವ ಮೂಲಕ ಗುರಿ ತಲುಪಲು ಬೇಕಾದ ಏರಿಳಿತಗಳನ್ನು ಅನುಭವಿಸಿ ಛಲದಂಕಮಲ್ಲ ನಂತೆ ಸಾಧನೆಯ ಹಾದಿಯನ್ನು ತಲುಪಬೇಕು ಎಂದು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.

ತಾಪಂ ಹಂಗಾಮಿ ಅಧ್ಯಕ್ಷೆ ಲಕ್ಷ್ಮೀದೇವಿ ಮಡ್ಡಿ ಮಾತನಾಡಿ, ವಿದ್ಯಾಭ್ಯಾಸ ಮಾಡುವಾಗಲೇ ಒಂದು ಸ್ಪಷ್ಟ ಗುರಿ ಹೊಂದಿರಬೇಕು. ಜೀವನದಲ್ಲಿ ಬರುವ ಸಂಕಷ್ಟಗಳ ಸರಮಾಲೆಯನ್ನು ದಿಟ್ಟವಾಗಿ ಎದುರಿಸಿ ಉನ್ನತ ಹುದ್ದೆ ಅಲಂಕರಿಸುವ ಮೂಲಕ ಮನಸ್ಸಿಗೂ ದೇಹಕ್ಕೂ ಆದ ಗಾಯಗಳನ್ನು ಮರೆತು ಸಾಧನೆಯ ನಗೆ ಬೀರಬೇಕು.

ಯಾವುದೇ ಕಾರಣಕ್ಕೂ ಪದವಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬೇಡಿ. ನಾನು ಪದವಿ ವಿದ್ಯಾಭ್ಯಾಸ ಮೊಡಕುಗೊಳಿಸಿದ ನಂತರ ಏನ್ಮಾಡುವದು ಎಂದು ತೋಚದೆ ಕುಳಿತಿದ್ದೆ, ನಂತರ ಬಂದ ರಾಜಕೀಯ ಅವಕಾಶವನ್ನು ಬಳಸಿಕೊಂಡು ಪ್ರಸ್ತುತ ತಾಪಂ ಅಧ್ಯಕ್ಷೆಯಾಗಿರುವ ಎಂದರು.

ಕಾರ್ಯಕ್ರಮದ ಆಯೋಜಕರಾದ ನೀಲಕಂಠ ಪೋಲಕಪಳ್ಳಿ ಪ್ರಾಸ್ತವಿಕವಾಗಿ ಮಾತನಾಡಿ, ವಿದ್ಯಾರ್ಥಿನಿಯರಿಗೆ ವೃತ್ತಿ ಪರ ಕೋರ್ಸ್‍ಗಳು ಮತ್ತು ಕೌಶಲ್ಯ ಅಭಿವೃದ್ಧಿ ಮಹತ್ವದ ಬಗ್ಗೆ ವಮನವರಿಕೆ ಮಾಡಿಕೊಟ್ಟರು.

ಪ್ರಾಂಶುಪಾಲ ಎನ್.ಸಿ.ಪಾಟೀಲ್ ಅಧ್ಯಕ್ಷತೆವಹಿಸಿದ್ದರು. ಬೋರಮ್ಮ ಮತ್ತು ಸಂಗಡಿಗರು ಪಾರ್ಥನೆ ಗೀತೆ ಹಾಡಿದರು. ಶಾಂಭವಿ ಮತ್ತು ಮೇಘಾ ನಿರೂಪಿಸಿದರು. ಅರುಣ ಸ್ವಾಗತಿಸಿದರು.

Related Articles

Leave a Reply

Your email address will not be published. Required fields are marked *

Back to top button