ಪ್ರಮುಖ ಸುದ್ದಿ

ಹತ್ರಾಸ್ ಪ್ರಕರಣ ಸಿಬಿಐ ಮಡಿಲಿಗೆ.!

ದೆಹಲಿಃ ಉತ್ತರ ಪ್ರದೇಶದ ಹಾತ್ರಸ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು‌ ಸಿಬಿಐಗೆ‌ ವಹಿಸಿ ಕೇಂದ್ರ ಸರ್ಕಾರ‌ ಅಧಿಸೂಚನೆ ಹೊರಡಿಸಿದೆ.

ಈ ಕುರಿತು ಅಧಿಕಾರಿಗಳು ಶನಿವಾರ ಮಾಹಿತಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು,‌ ಸೆಪ್ಟೆಂಬರ್ 29 ರಂದು ಯುಪಿ ಹತ್ರಾಸ್‌ ನಲ್ಲಿ ಯುವತಿ ಯೋರ್ವಳ‌ ಮೇಲೆ ನಾಲ್ವರು ಆರೋಪಿಗಳಿಂದ ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆಗಿಡಾಗಿದ್ದ ಯುವತಿಯನ್ನು ದೆಹಲಿಯ ಸಫ್ದರಜಂಗ್ ಆಸ್ಪತ್ರೆಯಲ್ಲಿ‌ ದಾಖಲಿಸಲಾಗಿತ್ತು.

ಆದರೆ ಇಂದು ವಾರದ ಬಳಿಕ ಚಿಕಿತ್ಸೆಗೆ ಸ್ಪಂಧಿಸಿದ ಯುವತಿ ಕೊನೆತುಸಿರೆಳೆದಿದ್ದಳು. ಆದಾದ ನಂತರ ಯುವತಿಯ ಶವ ಪೋಷಕರಿಗೊಪ್ಪಿಸದೆ ತಡ ರಾತ್ರಿ ಪೊಲಿಸರೇ ಅಂತ್ಯ ಸಂಸ್ಕಾರ ನೆರವೇರಿಸಿದ್ದ ಕಾರಣ‌ ಇದು ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.

ಸದ್ಯ ಈ ಪ್ರಕರಣ ಸಿಬಿಐಗೆ ವಹಿಸಿದ್ದು,‌ ಸತ್ಯಾಅಸತ್ಯ‌ ಹೊರ ಬೀಳಬೇಕಿದೆ. ಆರೋಪಿಗಳು ಯಾರೇ ಆಗಿರಲಿ‌ ಸೂಕ್ತ ಕ್ರಮಕೈಗೊಳ್ಳುವ ಮೂಲಕ ಸಾರ್ವಜನಿಕ ವಲಯದಲ್ಲಿ ಎಚ್ಚರಿಕೆಯ ಗಂಟೆಯಾಗಲಿ ಎಂಬುದೇ ವಿವಿ ಆಶಯವಾಗಿದೆ.

Related Articles

Leave a Reply

Your email address will not be published. Required fields are marked *

Back to top button