ಪ್ರಮುಖ ಸುದ್ದಿ

ರಫೇಲ್ ಮರುಪರಿಶೀಲನೆ ಅರ್ಜಿ ವಜಾ, ನ್ಯಾಯಾದೀಶರಲ್ಲಿ ಕ್ಷಮೆಯಾಚನೆ ಮಾಡಿದ ರಾಹುಲ್ ಗಾಂಧಿ

ವಿವಾDESK-   ರಪೇಲ್ ಖರೀದಿ ಬಗ್ಗೆ ತನಿಖೆಗೆ ಸುಪ್ರೀಂಕೊರ್ಟ್ ನಿರಾಕರಿಸಿದೆ. ರಾಹುಲ್ ಗಾಂಧಿ ಅವರಿಗೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಾಲಯದ ಆದೇಶದ ನಂತರ ರಾಹುಲ್ ಗಾಂಧಿ ಅವರು ಹೇಳಿಕೆ ಮೇಲೆ ಹೇಳಿಕೆ ನೀಡುವ ಮೂಲಕ ಬೇಜವಬ್ದಾರಿತನ ಪ್ರದರ್ಶಿಸಿರುವದನ್ನು ಸುಪ್ರೀಕೋರ್ಟ್ ಲೆಫ್ಟ್ ರೈಟ್ ತೆಗೆದುಕೊಂಡಿದೆ.

ರಾಹುಲ್ ಗಾಂಧಿ ರಫೇಲ್ ಖರೀದಿ ಬಗ್ಗೆ ದೊಡ್ಡ ಮಟ್ಟದ ತನಿಖೆ ನಡೆಸಬೇಕು. ಇಲ್ಲಿ ಅವ್ಯವಹಾರ ನಡೆದಿದೆ ಎಂದು ರಾಹುಲ್ ಗಾಂಧಿ ಅವರು ಆರೋಪಿಸಿದ್ದರು.

ಅಲ್ಲದೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಚೌಕಿದಾರ್ ಚೋರ್ ಹೈ ಎಂದು ತಾನೂ ಹೇಳೋದಲ್ಲ ಸುಪ್ರೀಂಕೋರ್ಟ್ ಹೇಳಿದೆ ಎಂದು ಹೇಳಿಕೆ ನೀಡಿದ್ದ ಹಿನ್ನೆಲೆ ರಾಹುಲ್ ರನ್ನು ನ್ಯಾಯಾಧೀಶರು ತೀವ್ರ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಕೋರ್ಟ್ ತೀರ್ಪಿನ ನಂತರವು ರಾಹುಲ್ ಗಾಂಧಿ ಯವರು ಬೇಜವಬ್ದಾರಿ ಹೇಳಿಕೆ ನೀಡಿರುವದನ್ನು ಕೋರ್ಟ್ ಗಮನಿಸಿದ ಹಿನ್ನೆಲೆ ರಾಹುಲ್ ಗಾಂಧಿಗೆ ಕೋರ್ಟ್ ತರಾಟೆ ತೆಗದುಕೊಂಡಿತ್ತು.

ರಾಹುಲ್ ಗಾಂಧಿ ಕ್ಷಮಾಪನೆ ಅರ್ಜಿ ಸಲ್ಲಿಸಿದ್ದು, ಸುಪ್ರೀಂಕೋರ್ಟ್ ಹೇಳಿಕೆ ನೀಡುವಾಗ ಜವಬ್ದಾರಿ ಎಂಬುದು ಇರಬೇಕು. ಸತ್ಯಾಅಸತ್ಯವನ್ನು ಅರಿತು ಹೇಳಿಕೆ ನೀಡಬೇಕೆಂದು ತಿಳಿಸಿತು ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button