ಪ್ರಮುಖ ಸುದ್ದಿ

ಐಟಿ ದಾಳಿ ಲೀಸ್ಟ್ ಎಲ್ಲಿ ಸಿದ್ಧವಾಗ್ತಿದೆ ಗೊತ್ತಾ..?

ಯಾದಗಿರಿ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಾಮ್ರಾಜ್ಯದ ಮೇಲೆ ಐಟಿ ದಾಳಿ ನಡೆದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ ಖರ್ಗೆ ಅದು ರಾಜಕೀಯ ಪ್ರೇರಿತ ದಾಳಿ ಎಂದಿದ್ದಾರೆ. ನಗರದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಅಧಿಕಾರಿಗಳು ದಾಳಿ ಪಟ್ಟಿ ಸಿದ್ಧಪಡಿಸುತ್ತಿಲ್ಲ.  ಬದಲಾಗಿ ಕೇಶವಕೃಪಾದಲ್ಲಿ ಆರ್ ಎಸ್ ಎಸ್ ಮುಖ್ಯಸ್ಥರು ಐಟಿ ಮತ್ತು ಇಡಿ ಅಧಿಕಾರಿಗಳು ದಾಳಿ ನಡೆಸುವ ಪಟ್ಟಿ ಸಿದ್ಧ ಪಡಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ದೇಶವನ್ನು ಯಾವುದಾದರೂ ಪಕ್ಷದ ನಾಯಕರು ನಡೆಸುತ್ತಿದ್ದರಾ ಅಥವಾ ಆರ್ ಎಸ್ ಎಸ್ ನಡೆಸುತ್ತಿದೆಯಾ ಎಂದು ಸಚಿವ ಖರ್ಗೆ ಮಾರ್ಮಿಕವಾಗಿ ಹೇಳಿದರು. ಆರ್ ಎಸ್ ಎಸ್ ಸಿದ್ಧಪಡಿಸಿದ ಪಟ್ಟಿಯಲ್ಲಿ ನೀವಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಖರ್ಗೆ ನಾನು ಆರ್ ಎಸ್ ಎಸ್ ಪಟ್ಟಿಯಲ್ಲಿದ್ದೇನೆ. ಆದರೆ, ಐಟಿ ಲೀಸ್ಟಲ್ಲಿ ಇರೋದಿಲ್ಲ ಎಂದು ನಗುತ್ತಲೇ ಉತ್ತರಿಸಿದರು.

Related Articles

Leave a Reply

Your email address will not be published. Required fields are marked *

Back to top button