RSS ಸಂಸ್ಥಾಪಕ ಹೆಡ್ಗೇವಾರ್ ಕಾಂಗ್ರೆಸ್ ನ ಹಿರಿಯ ನಾಯಕ- ಮೋಹನ್ ಭಾಗವತ್
ನವದೆಹಲಿಃ ಭವಿಷ್ಯದ ಭಾರತ ನಿರ್ಮಾಣ ಮಾಡುವಲ್ಲಿ ಆರ್ ಎಸ್ಎಸ್ ಸಂಸ್ಥಾಪಕ ಹೆಡ್ಗೇವಾರ್ ಅವಿರತವಾಗಿ ಶ್ರಮಿಸಿದ್ದಾರೆ. ಅವರ ರಾಷ್ಟ್ರ ಪ್ರೇಮದಿಂದಲೇ ಆರ್.ಎಸ್.ಎಸ್. ಉದಯವಾಯಿತು ಎಂದು ಆರ್.ಎಸ್.ಎಸ್.ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ನಗರದ ವಿಜ್ಞಾನ ಭವನದಲ್ಲಿ ಆಯೋಜಿಸಲಾದ “ಭವಿಷ್ಯದ ಭಾರತ ಆರ್.ಎಸ್.ಎಸ್. ದೃಷ್ಡಿಕೋನದಲ್ಲಿ” ಎಂಬ ವಿಷಯಾಧಾರಿತ ಮೂರು ದಿನಗಳ ಕಾಲ ನಡೆದ ವಿಚಾರ ಸಂಕಿರಣದ ಮೊದಲ ದಿನ ಮಾತನಾಡಿದರು.
ಆರ್.ಎಸ್.ಎಸ್. ಸಂಸ್ಥಾಪಕ ಹೆಡ್ಗೇವಾರ್ ಕಾಂಗ್ರೆಸ್ ನಲ್ಲಿ ವಿದರ್ಭ ಪ್ರಾಂತ್ಯದ ಹಿರಿಯ ನಾಯಕರಾಗಿದ್ದರು. ಅವರು ಗಾಂಧೀಜಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದರು.
ದೇಶ ಕಟ್ಟುವ ವಿಚಾರದಲ್ಲಿ ಸಂಘದ ಸ್ವಯಂ ಸೇವಕರು ಅವಿಶ್ರಾಂತವಾಗಿ ದುಡಿದಿದ್ದಾರೆ. ಆದರೆ, ಅವರ ತ್ಯಾಗ, ಬಲಿದಾನ ನಿರಂತರ ಶ್ರಮ ನಿರ್ಲಕ್ಷ್ಯಕ್ಕೊಳಗಾಗಿದೆ ಎಂದು ಬೇಸರಿಸಿದರು. ಅಲ್ಲದೆ ಸಂಘಟನೆಯನ್ನು ತಪ್ಪಾಗಿ ಅರ್ಥೈಸಿಲಾಗಿದೆ ಎಂದು ವಿಷಾಧಿಸಿದರು.
ನಂಬಿಕೆಗೆ ಹೆಸರಾದ ಸಂಘದ ಸರಿಸಾಟಿ ಸಂಘಟನೆಗಳು ದೇಶದಲ್ಲಿ ಯಾವುದೇ ಸಂಘಟನೆ ಇಲ್ಲ. ಈ ಸಂಘ ಎಂದಿಗೂ ಪ್ರಚಾರಕ್ಕಾಗಿ ಕೆಲಸ ಮಾಡುವದಿಲ್ಲ ಎಂದಿದ್ದಾರೆ.