ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು
ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು
ಹಾಸನಃ ಅನಾರೋಗ್ಯದಿಂದ ಬಳಲುತಿದ್ದ ಸಾಲುಮರದ ತಿಮ್ಮಕ್ಕ (109) ಅವರನ್ನು ಗುರುವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಲಾಕ್ ಡೌನ್ ಘೋಷಣೆಗೂ ಮುನ್ನವೇ ಬೇಲೂರಿನ ಬಳ್ಳೂರಿಗೆ ಬಂದಿದ್ದ ಅವರು ದತ್ತು ಪುತ್ರ ಉಮೇಶ ಅವರ ಮನೆಯಲ್ಲಿಯೇ ಇದ್ದರು ಎನ್ನಲಾಗಿದೆ.
ಗುರುವಾರ ಏಕಾಏಕಿ ಹೊಟ್ಟೆ ನೋವು ಕಾಣಿಸಿಕೊಂಡ ಪರಿಣಾಮ, ಅವರನ್ನು ಉಮೇಶ ಆಸ್ಪತ್ರೆಗೆ ಕರೆ ತಂದಿದ್ದಾರೆ ಎಂದು ತಿಳಿದು ಬಂದಿದೆ.
ತಿಮ್ಮಕ್ಕ ಮಕ್ಕಳಿಲ್ಲ ಎಂಬ ಕೊರಗದೆ ಸಾವಿರಾರು ಮರಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನೇ ಮಕ್ಕಳನ್ನಾಗಿ ನೋಡಿಕೊಂಡಳು. ಮಾಗಡಿ ತಾಲೂಕಿನ ಕುದೂರಿನಿಂದ ಹುಲಿಕಲ್ ವರೆಗೂ ರಸ್ತೆ ಬದಿ ಆಲದ ಸಸಿಗಳನ್ನು ನೆಟ್ಟು ನಿತ್ಯ ನೀರೆರಿಯುವ ಮೂಲಕ ಅವುಗಳನ್ನು ಬೆಳೆಸಿದರು.
ಗಿಡಮರಗಳನ್ನು ಬೆಳೆಸುವ ಮೂಲಕ ಉತ್ತಮ ಪರಿಸರವಾದಿಯಾಗಿ ಹೆಸರು ಪಡೆದರು. ದೇವರು ಅವರ ಆರೋಗ್ಯ ಸುಧಾರಿಸಿ ಬೇಗ ಗುಣಮುಖರಾಗಲಿ ಎಂದು ವಿನಯವಾಣಿ ಪ್ರಾರ್ಥಿಸುತ್ತದೆ.